ಮಂಡ್ಯ: ರಾಜ್ಯದ ವಿವಿಧೆಡೆ ಆಯೋಜಿಸಿದ್ದ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
ಜೂಡೋ, ಕುಸ್ತಿ, ಟ್ವೆಕೊಂಡೋ, ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಾದ ಹರ್ಷಿತಾ, ಉನ್ನತಿ, ಯೋಗೇಂದ್ರರಾಮ್, ಹೃತ್ವಕ್ ಆದಿತ್ಯಾ, ಕೃತಿಕ್, ಹೇಮಂತ್, ಗಗನ್, ನಿಖಿಲ್ವರ್ಧನ್ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಚೈತ್ರಶ್ರೀ, ಸ್ಫೂರ್ತಿ, ಪ್ರೀತಿ, ಸುಹಾನಾ ಬಾನು, ನಿರಂಜನ, ಸಬೀನ, ಮೋನಿಕಾ, ಆರ್.ಬಿ.ವರ್ಷ, ಕೆ.ವಿದ್ಯಾಶ್ರೀ, ಆರ್.ಬಿ.ಹರ್ಷಿತ್, ಚರಣ್, ವಿಶ್ವಾಸ್, ಹೃಷಿಕೇಶ್ ಅವರನ್ನು ಸನ್ಮಾನಿಸಲಾಯಿತು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್ ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡೆಯಲ್ಲೂ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರಾಟೆ ಮುಖ್ಯ ತರಬೇತುದಾರ ಜಿ.ಕುಬೇರ ನಾರಾಯಣ, ದೈಹಿಕ ಶಿಕ್ಷಣ ಶಿಕ್ಷಕರಾದ ಆರ್.ಆಶಾಲತಾ, ಎಂ.ಯೋಗೇಶ್, ತರಬೇತುದಾರರಾದ ಹರ್ಷಿತಾ, ಯಶ್ವಂತ್ಕುಮಾರ್ ಇತರರಿದ್ದರು.