More

    ದೇಶಾದ್ಯಂತ ಸಂಚಾರ ಮಾಡಿ ಅಧ್ಯಾತ್ಮದ ಜ್ಞಾನ ನೀಡಿದ ಶಂಕರಾಚಾರ್ಯರು

    ದೇವದುರ್ಗ: ಶಂಕರಾಚಾರ್ಯರು ದೇಶಾದ್ಯಂತ ಸಂಚಾರ ಮಾಡಿ ಆಧ್ಯಾತ್ಮಕ ಬೋಧನೆ ಮಾಡುವ ಮೂಲಕ ಸಂಸ್ಕೃತಿ ಉಳಿಸುವ ಜತೆಗೆ ಆದರ್ಶ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಹಸೀಲ್ದಾರ್ ವೈ.ಕೆ.ಬಿದರಿ ಹೇಳಿದರು.

    ಇದನ್ನೂ ಓದಿ: ಹಿಂದು ಧರ್ಮದ ಉಳಿವಿಗೆ ಶ್ರಮಿಸಿದ್ದ ಶಂಕರಾಚಾರ್ಯ

    ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಶಂಕರಾಚಾರ್ಯರು ಭಕ್ತಿಯ ಮೂಲಕವೇ ಅನುಯಾಯಿಗಳು, ಶಿಷ್ಯರನ್ನು ಸಂಪಾದನೆ ಮಾಡಿದ್ದಾರೆ. ಅಪಾರ ಜ್ಞಾನಿಯಾಗಿದ್ದ ಶಂಕರಾಚಾರ್ಯರು ದೇವಸ್ಥಾನ ನಿರ್ಮಾಣ ಮಾತ್ರವಲ್ಲ ಅನೇಕ ಗ್ರಂಥಗಳನ್ನು ಬರೆಯುವ ಮೂಲಕ ಸಮಾಜಕ್ಕೆ ಅಧ್ಯಾತ್ಮದ ಜ್ಞಾನ ನೀಡಿದ್ದಾರೆ. ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts