ಭಿಂಡ್: ಹನುಮಂತನನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ದೇಶದ ಹಲವಾರು ಭಾಗಗಳಲ್ಲಿ ಮಹಾವೀರ ಹನುಮಾನ್ ದೇವಾಲಯಗಳಿವೆ. ಹನುಮಂತನನ್ನು ನೆನೆದರೆ ಭಯದ ಛಾಯೆಗಳೆಲ್ಲ ಓಡಿಹೋಗುತ್ತವೆ. ಅಂದಹಾಗೆ ಮಧ್ಯಪ್ರದೇಶದ ಭಿಂಡ್ನಲ್ಲಿ ಕೊಂಡುಬಾ ಧಾಮ್ ಎಂಬ ಹನುಮಾನ್ ದೇವಾಲಯವಿದೆ. ಅಲ್ಲಿ ಹನುಮ ದೇವರು ವೈದ್ಯರಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಹೌದು, ಇದು ಆಶ್ಚರ್ಯವಾದರೂ ಸತ್ಯ. ಈ ದೇವಾಲಯಕ್ಕೆ ಭೇಟಿ ನೀಡಲು ದೂರದೂರುಗಳಿಂದ ಜನರು ಬರುತ್ತಾರೆ. ಕ್ಯಾನ್ಸರ್ ನಿಂದ ಮಾರಣಾಂತಿಕ ಕಾಯಿಲೆಗಳವರೆಗೆ ಎಲ್ಲವನ್ನೂ ದೇವರು ಗುಣಪಡಿಸುತ್ತಾನೆ ಎಂಬ ನಂಬಿಕೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಹನುಮಂತನನ್ನು ‘ಜೈ ಭಜರಂಗಬಲಿ’ ಎಂದು ಪೂಜಿಸಲಾಗುತ್ತದೆ. ಅಷ್ಟೇ ಅಲ್ಲ, ಅದರ ದೇವಾಲಯವನ್ನು ಹನುಮಾನ್ ಕ್ಲಿನಿಕ್ ಎಂದೂ ಕರೆಯಲಾಗುತ್ತದೆ.
ದೇವಸ್ಥಾನದ ಅರ್ಚಕರು ಹಾಗೂ ಸ್ಥಳೀಯ ಭಕ್ತರ ಪ್ರಕಾರ, ದಂಡುವಾ ಧಾಮಕ್ಕೆ ಬಂದು ಭಜರಂಗಬಲಿಯ ದರ್ಶನ ಪಡೆದರೆ ರೋಗಿಗಳು ತಕ್ಷಣ ಗುಣಮುಖರಾಗುತ್ತಾರೆ ಎಂಬ ವಾಡಿಕೆಯಿದೆ. ಹೆಚ್ಚಾಗಿ ಇಲ್ಲಿಗೆ ಕ್ಯಾನ್ಸರ್ ರೋಗಿಗಳು ಬರುತ್ತಾರೆ. ಹನುಮಂತನ ಪಾದ ಸ್ಪರ್ಶಿಸಿದ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ.
ಅಂದಹಾಗೆ ಡಾ.ಬಜರಂಗಬಲಿಯವರನ್ನು ಸತತ 5 ಮಂಗಳವಾರ ಧ್ಯಾನಿಸಿ ಅವರ ಚರಣಪಾದುಕ ನೀರು ಕುಡಿದರೆ ಕ್ಯಾನ್ಸರ್ ನಂತಹ ಮಾರಕ ರೋಗಗಳು ಗುಣವಾಗುತ್ತವಂತೆ. ಪ್ರಾಚೀನ ಕಾಲದಲ್ಲಿ ಹನುಮಂತ ದೇವರೇ ವೈದ್ಯರಾಗಿ ಬಂದು ರೋಗಿಗಳನ್ನು ನೋಡಿಕೊಳ್ಳುತ್ತಿದ್ದರಂತೆ. ಅಂದಿನಿಂದ, ಈ ಚಿಕಿತ್ಸಾಲಯವು ಅವರಿಗೆ ದೇವಾಲಯವಾಗಿದೆ.