ಚೆನ್ನೈ: ಲೆಜಂಡರಿ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಕರೊನಾ ಹಿನ್ನೆಲೆಯಲ್ಲಿ ಚೆನ್ನೈ ಎಂಜಿಎಂ ಆಸ್ಪತ್ರೆಗೆ ಆಗಸ್ಟ್ 5ರಂದೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಹಜ ಒಂದಷ್ಟು ಕಾಯಿಲೆಗಳು ಬಾಧಿಸಿರುವುದರಿಂದ ಚೇತರಿಕೆ ತಡವಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಕರೊನಾ ವರದಿ ಸಹ ನೆಗೆಟಿವ್ ಬಂದಿದೆ. ಹೀಗಿರುವಾಗಲೇ ಅಪ್ಪನ ಆರೋಗ್ಯದ ಬಗ್ಗೆ ಪುತ್ರ ಎಸ್ಪಿ ಚರಣ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬಾಲನಟಿ ನಾಯಕಿ ಆದಾಗ…
‘ಈ ಮೊದಲೇ ಹೇಳಿದಂತೆ ಅಪ್ಪನ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆಗಳಿಲ್ಲ. ಆದರೆ, ಈ ಮೊದಲಿದಷ್ಟು ಆತಂಕ ಈಗಿಲ್ಲ. ಎಲ್ಲವೂ ನಾರ್ಮಲ್ ಆಗಿದೆ. ಇನ್ನೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಬೇಕಿದೆ. ಶ್ವಾಸಕೋಶದ ಚೇತರಿಕೆ ಸದ್ಯಕ್ಕೆ ಬಹುಮುಖ್ಯವಾಗಿದೆ. ವೆಂಟಿಲೇಟರ್ ಮೂಲಕವೇ ಅವರಿನ್ನೂ ಉಸಿರಾಡುತ್ತಿದ್ದಾರೆ. ವೈದ್ಯರು ನಿತ್ಯ 15ರಿಂದ 20 ನಿಮಿಷ ಫಿಸಿಯೋಥೆರಪಿ ಮಾಡಿಸುತ್ತಿದ್ದಾರೆ. ಶುಕ್ರವಾರದಿಂದ ಆಹಾರ ಸೇವನೆ ಮಾಡುತ್ತಿದ್ದಾರೆ’ ಎಂದಿದ್ದಾರೆ ಚರಣ್.
ಆಗಸ್ಟ್ 5ರಂದು ಕರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್ಪಿಬಿ ಬಳಿಕ ಒಂದು ವಾರದ ಬಳಿಕ ಅವರನ್ನು ತೀವ್ರ ನಿಗಾ ಘಟಕಕ್ಕೆ ರವಾನೆ ಮಾಡಲಾಗಿತ್ತು. ಸೆ.7 ರಂದು ಕರೊನಾ ವರದಿ ನೆಗೆಟಿವ್ ಬಂದಿತ್ತು. ಅಷ್ಟೇ ಅಲ್ಲ ಐಪಿಎಲ್ ಪಂದ್ಯಕ್ಕೆ ಕಾಯುತ್ತಿರುವ ಬಗ್ಗೆಯೂ ಎಸ್ಪಿಬಿ ಹೇಳಿಕೊಂಡಿದ್ದರು. (ಏಜೆನ್ಸೀಸ್)