ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಬೀಜ ಘಟಕದಲ್ಲಿ ಮೇ 18ರಿಂದ ಬಿತ್ತನೆ ಬೀಜ ಮಾರಾಟ ಮಾಡಲಾಗುವುದು.
ಹೆಸರು, ಉದ್ದು, ಭತ್ತ, ಸೋಯಾಅವರೆ, ಅಲಸಂದಿ, ಮೆಣಸಿನ ಬೀಜ ಮತ್ತು ಈರುಳ್ಳಿ ಬೆಳೆಗಳ ಪ್ರಮಾಣೀಕೃತ ಮತ್ತು ನಿಜ ಬೀಜಗಳನ್ನು ಮಾರಾಟ ಮಾಡಲಾಗುವುದು.
ಪ್ರತಿ ರೈತರಿಗೆ ಗರಿಷ್ಠ 5 ಎಕರೆಗೆ ಬೇಕಾಗುವ ಬೀಜಗಳನ್ನು ಮಾರಾಟ ಮಾಡಲಾಗುವುದು. ಆಸಕ್ತ ರೈತರು ಜಮೀನಿನ ಪಹಣಿ ಮತ್ತು ಆಧಾರ್ ಕಾರ್ಡ್ಗಳನ್ನು ತರಬೇಕು ಎಂದು ಪ್ರಕಟಣೆ ತಿಳಿಸಿದೆ