More

    ಕಾಂಗ್ರೆಸ್​ ರಾಜ್ಯಸಭಾ ಸದಸ್ಯರೊಂದಿಗೆ ನಾಳೆ ಸಭೆ ನಡೆಸಲಿರುವ ಸೋನಿಯಾ ಗಾಂಧಿ…

    ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್​ ಲೋಕಸಭಾ ಸದಸ್ಯರ ಸಭೆ ನಡೆಸಿದ್ದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಜುಲೈ 30 (ನಾಳೆ)ರಂದು ರಾಜ್ಯಸಭೆಯ ಕಾಂಗ್ರೆಸ್​ ಎಂಪಿಗಳ ಸಭೆಯನ್ನು ಕರೆದಿದ್ದಾರೆ. ಪ್ರಸಕ್ತ ದೇಶದ ಕೊವಿಡ್​-19 ಪರಿಸ್ಥಿತಿಯನ್ನು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಈ ಹಿಂದೆ ಲೋಕಸಭಾ ಸದಸ್ಯರ ಸಭೆ ಕರೆದಾಗ ಅಲ್ಲಿ ಮತ್ತೆ ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಏರಬೇಕು ಎಂಬುದೇ ಬಹುಮುಖ್ಯ ಚರ್ಚೆಯಾಗಿತ್ತು. ಇದನ್ನೂ ಓದಿ: ವಿಶ್ವಕಪ್ ಗೆದ್ದ ಬಳಿಕ ದಿಗ್ಗಜ ಸಚಿನ್‌ರನ್ನು ಹೆಗಲ ಮೇಲೆ ಹೊತ್ತು ಮೈದಾನ ಸುತ್ತಿದ್ದೇಕೆ..?

    ಇತ್ತೀಚೆಗೆ ಕಾಂಗ್ರೆಸ್​ ನಾಯಕರು ಕೇಂದ್ರದ ವಿರುದ್ಧ ಹೆಚ್ಚಾಗಿ ಕಿಡಿಕಾರುತ್ತಿದ್ದು, ಸೋಮವಾರ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಹಾಗೇ ರಾಜಸ್ಥಾನದಲ್ಲಿ ಕಾಂಗ್ರೆಸ್ ನಾಯಕರ ನಡುವೆಯೇ ಭಿನ್ನಮತ ಎದ್ದಿದೆ. ಈ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಡೆಸಲಿರುವ ವರ್ಚ್ಯುವಲ್​ ಮೀಟಿಂಗ್ ಇನ್ನಷ್ಟು ಕುತೂಹಲ ಮೂಡಿಸಿದೆ.(ಏಜೆನ್ಸೀಸ್​)

    ‘ಯಾರಾದರೂ ಸತ್ತರೆ ನಿಮಗೆ ಅವರ ಬೆಡ್​…ಅಲ್ಲಿಯವರೆಗೂ ನೆಲದ ಮೇಲೆ ಮಲಗಿ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts