ತಿರುವನಂತಪುರಂ: ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಅದರಲ್ಲೂ ತಿರುವನಂತಪುರಂ ಕೊವಿಡ್-19 ಹಾಟ್ಸ್ಫಾಟ್ ಆಗಿ ಬದಲಾಗುತ್ತಿದೆ. ಈ ಬಗ್ಗೆ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ.
ತಿರುವನಂತಪುರಂದಲ್ಲಿ ಕೊವಿಡ್-19 ಪರಿಸ್ಥಿತಿ ಹದಗೆಡುತ್ತಿದೆ. ದಿನೇದಿನೇ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್ ಕಾರ್ಯ ತುಂಬ ಜಟಿಲವಾಗಿ ಪರಿಣಮಿಸುತ್ತಿದೆ. ಕೊವಿಡ್-19 ವಿರುದ್ಧದ ಸೆಣೆಸಾಟ ನಮಗೆ ಜ್ವಾಲಾಮುಖಿಯ ಮೇಲೆ ಕುಳಿತಂಥ ಅನುಭವ ಕೊಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಳಿದಷ್ಟು ಬೆಡ್ಗಳನ್ನು ಕೊಟ್ಟಿಲ್ಲ ಖಾಸಗಿ ಆಸ್ಪತ್ರೆಗಳು; ಚಿಕಿತ್ಸೆ ಕೊಡದಿದ್ರೆ ಕ್ರಿಮಿನಲ್ ಕೇಸ್ ಎಂದ್ರು ಸಚಿವ ಸುಧಾಕರ್
ತಿರುವನಂತಪುರಂನಲ್ಲಿ ಕರೊನಾ ಸಮುದಾಯ ಪ್ರಸರಣ ಶುರುವಾಗಿರಬಹುದು ಎಂಬ ಬಲವಾದ ಅನುಮಾನ ಬಲವಾಗುತ್ತಿದೆ. ಕಂಟೇನ್ಮೆಂಟ್ ಝೋನ್ಗಳಲ್ಲಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಆಹಾರಗಳನ್ನು ಡಿಲೆವರಿ ಕೊಡುವ ಹುಡುಗರಲ್ಲಿಯೂ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತರುತ್ತಿದೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.
ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5,429ಕ್ಕೆ ಏರಿದೆ. ತಿರುವನಂತಪುರಂನಲ್ಲಿ ಒಟ್ಟು 260 ಮಂದಿ ಸೋಂಕಿತರು ಇದ್ದಾರೆ. ಆದರೆ 13,513 ಜನರು ಅಬ್ಸರ್ವೇಶನ್ನಲ್ಲಿದ್ದು, ಇನ್ನೆಷ್ಟು ಮಂದಿಯಲ್ಲಿ ಸೋಂಕು ಕಾಣಿಸಕೊಳ್ಳುತ್ತದೆಯೇ ಎಂಬ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. (ಏಜೆನ್ಸೀಸ್)
ಹುಬ್ಬಳ್ಳಿಗೆ ಹೋಗಿಬಂದವನಲ್ಲಿ ಕರೊನಾ ಸೋಂಕು: ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಸ್ಥಾನ ಸೀಲ್ಡೌನ್