More

    ತಂಗಿ ರಕ್ಷಿಸಲು ಹೋಗಿ ಅಕ್ಕನ ಸಾವು

    ಚನ್ನಮ್ಮ ಕಿತ್ತೂರು: ವಿದ್ಯುತ್ ಸ್ಪರ್ಶಿಸಿದ್ದ ತಂಗಿಯನ್ನು ರಕ್ಷಿಸಲು ಹೋಗಿ ಅಕ್ಕ ಮೃತಪಟ್ಟ ಘಟನೆ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಸಂಜೋತಾ ಗುಂಡಪ್ಪ ಜಾಯ್ಕನವರ (22) ಮೃತ ದುರ್ದೈವಿ.ಗುಂಡಪ್ಪ ಜಾಯ್ಕನವರ ತಮ್ಮ ನಿವಾಸದ ಮುಂದೆ ತಗಡಿನ ಶೆಡ್ ಹಾಕಿಸಿದ್ದರು.

    ಅದಕ್ಕೆ ವಿದ್ಯುತ್ ಪ್ರವಹಿಸುತ್ತಿದ್ದ ಸರ್ವಿಸ್ ತಂತಿ ತುಂಡಾಗಿ ಬಿದ್ದು ತಗುಲಿದ ಪರಿಣಾಮ ಅವರ ಮೂರನೇ ಮಗಳಿಗೆ ವಿದ್ಯುತ್ ಸ್ಪರ್ಶವಾಗಿತ್ತು.

    ಇದನ್ನು ಕಂಡ ಮನೆಯ ಒಳಗೆ ಕುಳಿತಿದ್ದ ಎರಡನೇ ಮಗಳು ಸಂಜೋತಾ, ತನ್ನ ತಂಗಿಯನ್ನು ರಕ್ಷಿಸಲು ಹೋಗಿ ನಿಯಂತ್ರಣ ತಪ್ಪಿ ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೃತ ಪಟ್ಟಿದ್ದಾಳೆ. ತಂಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts