More

    ಪೊಲೀಸ್ ಭದ್ರತೆ ಹಿಂಪಡೆದ ಮರುದಿನವೇ ಕೊಲೆ; ಖ್ಯಾತ ಗಾಯಕ, ಕಾಂಗ್ರೆಸ್​ ನಾಯಕನನ್ನು ಗುಂಡಿಟ್ಟು ಕೊಂದರು!

    ನವದೆಹಲಿ: ನಿನ್ನೆಯವರೆಗೂ ಪೊಲೀಸ್ ಭದ್ರತೆಯಲ್ಲಿದ್ದ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕರೂ ಆಗಿದ್ದ ವ್ಯಕ್ತಿ ಇಂದು ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿಯಿಂದ ಕೊಲೆಯಾಗಿ ಹೋಗಿದ್ದಾರೆ.

    ಪಂಜಾಬಿ ಗಾಯಕ ಸಿದ್ಧು ಮೂಸೆ ವಾಲಾ (28) ಕೊಲೆಯಾದ ವ್ಯಕ್ತಿ. ಇವರನ್ನು ಅಪರಿಚಿತ ದುಷ್ಕರ್ಮಿಗಳು ಇಂದು ಪಂಜಾಬ್​ನ ಮನ್ಸಾ ಜಿಲ್ಲೆಯ ಜವಹರ್ಕೆ ಗ್ರಾಮದಲ್ಲಿ ಗುಂಡಿಟ್ಟು ಕೊಂದಿದ್ದಾರೆ. 424 ಜನರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಪೊಲೀಸರು ನಿನ್ನೆಯಷ್ಟೇ ಹಿಂಪಡೆದಿದ್ದರು. ಆ ಪೈಕಿ ಸಿದ್ಧು ಕೂಡ ಒಬ್ಬರಾಗಿದ್ದು, ಭದ್ರತೆ ಹಿಂಪಡೆದ ಮರುದಿನವೇ ಹತ್ಯೆಗೀಡಾಗಿದ್ದು ಅಚ್ಚರಿ ಮೂಡಿಸಿದೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಪ್​ ಅಭ್ಯರ್ಥಿ ವಿಜಯ್​ ಸಿಂಗ್ಲಾ ವಿರುದ್ಧ ಸ್ಪರ್ಧಿಸಿದ್ದ ಸಿದ್ಧು 63 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇತ್ತೀಚೆಗೆ ತಮ್ಮ ಸ್ಕೇಪ್​ಗೋಟ್ ಎಂಬ ಗೀತೆಯಲ್ಲಿ ಆಪ್​ ಬೆಂಬಲಿಗರನ್ನು ಗದ್ದರ್ ಎಂದು ಟೀಕಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

    ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

    ರಾಜ್ಯಸಭೆಗೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳಾಗಿ ನಿರ್ಮಲಾ ಸೀತಾರಾಮನ್, ನವರಸನಾಯಕ ಜಗ್ಗೇಶ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts