ಸಿಂಧನೂರು: ನಗರದ ಎಫ್ಆರ್ಸಿಎಸ್ ಕ್ಲಬ್ನಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿಯಲ್ಲಿ 55 ವಯೋಮಿತಿಯ ಸಿಂಗಲ್ಸ್ನಲ್ಲಿ ನಗರದ ಸಿ.ಟಿ.ಪಾಟೀಲ್ ಹಾಗೂ ಬಾಗಲಕೋಟೆಯ ಉಜ್ವಲ್ ಸಕ್ರಿ ಸೆಮಿಫೈನಲ್ ತಲುಪಿದ್ದಾರೆ.
ಸಿ.ಟಿ.ಪಾಟೀಲ್ 6-1, 6-0 ಹಾಗೂ 6-2 ಪಾಯಿಂಟ್ಗಳೊಂದಿಗೆ ಹಾಗೂ ಉಜ್ವಲ್ ಸಕ್ರಿ 6-2 ಹಾಗೂ 6-4 ಪಾಯಿಂಟ್ಗಳೊಂದಿಗೆ ಜಯಗಳಿಸಿದರು. 35 ವರ್ಷ ವಯೋಮಿತಿಯ ಸಿಂಗಲ್ಸ್ನಲ್ಲಿ ವಿಶ್ವನಾಥ ಮಾಲಿ ಪಾಟೀಲ್ ಮೂರನೆ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. 65 ವರ್ಷ ವಯೋಮಿತಿ ವಿಭಾಗದಲ್ಲಿ ಧಾರವಾಡದ ನಾಗರಾಜ ಅಂಬ್ಲಿ, ಸಿಂಧನೂರಿನ ಜುಬೇರ್ ಪಾಷಾ, ಬೆಂಗಳೂರಿನ ಪ್ರೇಮಕುಮಾರ, ಗದಗಿನ ಗಂಗಾಧರ ತಡಿ, ರಾಯಚೂರಿನ ಸೋಮ ನಾಗರಾಜಗೌಡ, ದಾವಣಗೆರೆ ಕೆ.ಪಿ. ಚಂದ್ರಪ್ಪ, ಸಿಂಧನೂರಿನ ಆರ್.ತಿಮ್ಮಯ್ಯ ನಾಯಕ, ಬಳ್ಳಾರಿಯ ಜೋಸೆಫ್ ಕುಮಾರ ಕ್ವಾರ್ಟರ್ಫೈನಲ್ ತಲುಪಿದ್ದಾರೆ.