More

    ಕಣ್ಣಿಗೆ ಖಾರ ಎರಚಿ ಯುವಕನ ಬರ್ಬರ ಕೊಲೆ

    ಸಿಂದಗಿ: ತಾಲೂಕಿನ ಬೂದಿಹಾಳ ಪಿ.ಎಚ್. ಗ್ರಾಮದಲ್ಲಿ ಹಣದ ವ್ಯವಹಾರ ಹಿನ್ನೆಲೆ ಬುಧವಾರ ಬೆಳಗ್ಗೆ ಯುವಕನೊಬ್ಬನನ್ನು ಮನಬಂದಂತೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಗ್ರಾಮದ ಅನೀಲ ಶರಣಪ್ಪ ಇಂಗಳಗಿ (30) ಎಂಬುವವರು ಕೊಲೆಯಾದ ವ್ಯಕ್ತಿ. ಮೂವರು ಯುವಕರು ಹರಿತವಾದ ಚಾಕುವಿನಿಂದ ಕುತ್ತಿಗೆ, ಹೊಟ್ಟೆಗೆ ತಿವಿದು ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.

    ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ಬಳಿಯ ಶರಣು ಕುಂಬಾರ ಅವರ ಹೊಟೇಲ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದ ಅನೀಲನ ಮೇಲೆ ಗ್ರಾಮದ ಇಬ್ಬರು ಹಾಗೂ ಪಕ್ಕದ ಗ್ರಾಮ ಓತಿಹಾಳದ ಯುವಕ ಸೇರಿ ಏಕಾಏಕಿಯಾಗಿ ಆತನ ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾರೆ. ಆಗ ಅನೀಲನು ಅವರಿಂದ ತಪ್ಪಿಸಿಕೊಳ್ಳಲು ಹೊಟೇಲಿನಿಂದ ಹೊರ ಓಡಿ ಬಂದರೂ ದುಷ್ಕರ್ಮಿಗಳು ಬಿಡದೇ ಬೆನ್ನತ್ತಿ ಹೊಟ್ಟೆಗೆ, ಕೈಗೆ ಚಾಕು ಇರಿದಿದ್ದಾರೆ. ಅನೀಲನ ಹೆಬ್ಬೆರಳು ಕತ್ತರಿಸಿದೆ ಅಲ್ಲದೆ ಅಂಗೈ ಕೂಡ ಹರಿದಿದ್ದಲ್ಲೇ, ಚಾಕು ಅನೀಲನ ದೇಹದಲ್ಲೇ ನೇತಾಡುತ್ತಿತ್ತು.

    ನೆಲಕ್ಕೆ ಬಿದ್ದ ಅನೀಲನ ಮೇಲೆ ಮುಗಿಬಿದ್ದಿದ್ದ ಮೂವರು ಆರೋಪಿಗಳು ಜನರ ಆಗಮನ ಕಂಡು ಅಲ್ಲಿಂದ ಪರಾರಿಯಾಗಿದ್ದಾರೆ.

    ಈ ಕುರಿತು ಪೊಲೀಸರು ಅನೀಲನ ತಂದೆ ಶರಣಪ್ಪನನ್ನು ವಿಚಾರಿಸಿದಾಗ ಇತ್ತೀಚೆಗೆ ಗ್ರಾಮದಲ್ಲಿ ಕೊಲೆಗೈದ ಯುವಕನೊಂದಿಗೆ ಕೊಲೆಯಾದ ಅನೀಲನ ಜತೆ ಹಣದ ವ್ಯವಹಾರವಿತ್ತು. ಈ ಹಿನ್ನೆಲೆ ಇಬ್ಬರ ನಡುವೆ ಬಾಯಿ ಮಾತಿನ ಚಕಮಕಿ ಆಗಿತ್ತು ಎಂದು ದೂರಿದ್ದಾನೆ.

    ಘಟನೆ ತಿಳಿದ ಸಿಪಿಐ ಎಚ್.ಎಂ. ಪಟೇಲ, ಪಿಎಸ್‌ಐ ಸಂಗಮೇಶ ಹೊಸಮನಿ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದು, ಕೊಲೆಗಾರ ಯುವಕರ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಕುರಿತು ಕೊಲೆಯಾದ ಅನೀಲನ ತಂದೆ ಶರಣಪ್ಪ ಇಂಗಳಗಿ ನೀಡಿದ ದೂರಿನನ್ವಯ ಪ್ರಕರಣ ಸಿಂದಗಿ ಠಾಣೆಯಲ್ಲಿ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts