More

    ವಯನಾಡಿನಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾದ್ರು ಸಿದ್ದಿಕ್​ ಕಪ್ಪನ್​ ಪತ್ನಿ

    ವಯನಾಡ್​: ಹಾಥರಸ್ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಮನೆಗೆ ಹೋಗಲೆತ್ನಿಸಿದ್ದ ಪತ್ರಕರ್ತ ಸಿದ್ದಿಕ್​ ಕಪ್ಪನ್​ ಮತ್ತು ಮೂವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನ ಅವಧಿ ಎರಡನೇ ಬಾರಿ ನವೆಂಬರ್ 2 ರ ತನಕ ವಿಸ್ತರಣೆಯಾಗಿದೆ. ಈ ನಡುವೆ, ಕಪ್ಪನ್​ ಬಿಡುಗಡೆಗೆ ಆಗ್ರಹಿಸಿದ್ದ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಕಪ್ಪನ್ ಪತ್ನಿ ರೈಹನತ್​ ನ್ಯಾಯ ದೊರಕಿಸಿಕೊಡುವಂತೆ ಮನವಿ ಸಲ್ಲಿಸಿದರು.

    ಕಲ್ಪೆಟ್ಟಾ ಗೆಸ್ಟ್​ ಹೌಸ್​ನಲ್ಲಿದ್ದ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ರೈಹನತ್​, ನಮಗೆ ನ್ಯಾಯ ದೊರಕುವ ವಿಶ್ವಾಸವಿದೆ. ಕಪ್ಪನ್ ವಿರುದ್ಧ ಇನ್ನಷ್ಟು ಆರೋಪಗಳನ್ನು ಹೊರಿಸಿದರೆ ಎಂಬ ಆತಂಕ ನಮಗಿದೆ. ಬಂಧನದ ಬಳಿಕ ಅವರನ್ನು ಸಂಪರ್ಕಿಸುವುದು ಸಾಧ್ಯವಾಗಿಲ್ಲ. ವಕೀಲರಿಗೂ ಸಂಪರ್ಕ ಸಾಧ್ಯವಾಗಿಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ! 

    ಸ್ವಕ್ಷೇತ್ರವಾಗಿರುವ ವಯನಾಡಿನಲ್ಲಿ ಸಂಸದ ರಾಹುಲ್ ಗಾಂಧಿ ಮೂರು ದಿನಗಳಿಂದ ತಂಗಿದ್ದು, ಕ್ಷೇತ್ರ ಕಾರ್ಯಗಳತ್ತ ಗಮನಹರಿಸಿದ್ದಾರೆ. (ಏಜೆನ್ಸೀಸ್)

    ಫೈನಲ್ ಬ್ಯಾಚಿನ ವಿದ್ಯಾರ್ಥಿಗಳಿಗೆ ಕರೊನಾ ಸಂಕಷ್ಟ ತಂದೊಡ್ಡಿದ ಸಂಕಟವಿದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts