ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಕಾತುರದಿಂದ ಇದ್ದೇನೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾದಯಾತ್ರೆಗೆ ಹೊರಟ ಕೆಲವೇ ಹೊತ್ತಲ್ಲಿ ವಾಪಸ್ ಬಂದಿದ್ದಾರೆ.
ಹೊಸ ಶೂ ಖರೀದಿಸಿ, ಭಾರಿ ಉತ್ಸಾಹದಿಂದಲೇ ಸಜ್ಜಾಗಿ ಹುಮ್ಮಸ್ಸಿನಿಂದಲೇ ರಸ್ತೆಗಿಳಿದಿದ್ದ ಅವರ ನಡಿಗೆಗೆ ಅನಾರೋಗ್ಯ ಹಿನ್ನಡೆ ಉಂಟಾಗಿಸಿದೆ. ಮೇಕೆದಾಟು ಪಾದಯಾತ್ರೆ ಸಂಗಮ ಕ್ಷೇತ್ರದಿಂದ ಆರಂಭವಾಗಿ ಕೆಲವೇ ಕಿಲೋಮೀಟರ್ ದೂರ ಬರುತ್ತಿದ್ದಂತೆ ಸಿದ್ದರಾಮಯ್ಯ ವಾಪಸ್ ಬರುವಂತಾಗಿದೆ.
ಮಾರ್ಗಮಧ್ಯೆ ಹೆಗ್ಗನೂರು ಬಳಿ ಸುಸ್ತಾದ ಸಿದ್ದರಾಮಯ್ಯ ಅವರನ್ನು ವೈದ್ಯರು ತಪಾಸಣೆಗೆ ಒಳಪಡಿಸಿದರು. ಜ್ವರವೂ ಇದ್ದಿದ್ದರಿಂದ ವೈದ್ಯರ ಸಲಹೆ ಮೇರೆಗೆ ಪಾದಯಾತ್ರೆಯಿಂದ ಹಿಂದೆ ಸರಿದು ಬೆಂಗಳೂರಿಗೆ ಮರಳಿದ ಸಿದ್ದರಾಮಯ್ಯ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸುಮಾರು ಆರು ಕಿ.ಮೀ. ಮಾತ್ರ ನಡೆದು ವಾಪಸ್ ಆದ ಸಿದ್ದರಾಮಯ್ಯ ನಾಳೆ ಮತ್ತೆ ಪಾದಯಾತ್ರೆಗೆ ಜೊತೆ ಆಗಲಿದ್ದಾರಾ ಎಂಬುದು ಇನ್ನೂ ಖಚಿತವಾಗಿಲ್ಲ.
ಗಂಡನನ್ನು ಕೊಲ್ಲಿಸಿ ಅಪಘಾತ ಎಂದು ಬಿಂಬಿಸಿದ್ದ ಪತ್ನಿ; ಕೊಲೆಗೈದ ಪ್ರಿಯಕರನ ಸಹಿತ ಸಿಕ್ಕಿಬಿದ್ದಳು; ಒಟ್ಟು ಮೂವರ ಬಂಧನ…