More

    ಕಾಫಿನಾಡಿಗೆ ಸಿದ್ದರಾಮಯ್ಯ ಆಗಮನ: ಶೃಂಗೇರಿಗೆ ಕಾಲಿಡದಂತೆ ‘ಗೋ ಬ್ಯಾಕ್ ಅಭಿಯಾನ’

    ಚಿಕ್ಕಮಗಳೂರು: ಕೊಡಗು ಜಿಲ್ಲೆ ಭೇಟಿ ವೇಳೆ ಸಾಕಷ್ಟು ವಿರೋಧ ಎದುರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಫಿನಾಡಿಗೆ ಆಗಮಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. ಆದರೆ ನಾಳೆ ಶೃಂಗೇರಿಗೆ ಸಿದ್ದು ಭೇಟಿ ನೀಡಲಿದ್ದು, ಈ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.

    ಕೊಡಗು ಜಿಲ್ಲೆ ಭೇಟಿ ಬಳಿಕ ಇಂದು ಸಂಜೆ ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಿರುಗುಂದಕ್ಕೆ ಬಂದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕೋರಿದ್ದಾರೆ. ನಾಳೆ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಕೊಪ್ಪ ಶೃಂಗೇರಿ ಮೂಡಿಗೆರೆ ತಾಲೂಕಿನ ಮಳೆ ಹಾನಿ ಪ್ರದೇಶಕ್ಕೆ ತೆರಳಲಿದ್ದಾರೆ. ಕೊಡಗಿನಲ್ಲಿ ಆದ ಘಟನೆ ಮರುಕಳಿಸಬಾರದೆಂದು ಜಿಲ್ಲೆಯ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

    ಜಾಲತಾಣದಲ್ಲಿ ವಿರೋಧ: ಶೃಂಗೇರಿಯಂತಹ ಪವಿತ್ರ ಕ್ಷೇತ್ರಕ್ಕೆ, ಶಂಕರಾಚಾರ್ಯರು ನಡೆದಾಡಿದ ಮಣ್ಣಿಗೆ ಹಿಂದೂ ವಿರೋಧಿ ಸಿದ್ದರಾಮಯ್ಯ ಕಾಲಿಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಗೋ ಬ್ಯಾಕ್ ಅಭಿಯಾನ ಶುರುವಾಗಿದೆ.

    ನಾವೇನು ಸುಮ್ಮನೆ ಕೂರಲ್ಲ, ಇಡೀ ರಾಜ್ಯದಲ್ಲಿ ಬೆಂಕಿ ಹಚ್ತೀವಿ: ಸಿದ್ದರಾಮಯ್ಯ ಗುಡುಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts