ಮುಂಬೈ: ಬಾಲಿವುಡ್ನಲ್ಲಿ ಬ್ರೇಕಪ್ಗಳು, ಪ್ಯಾಚ್ಅಪ್ಗಳು ಮತ್ತು ರಿಲೇಶನ್ಶಿಪ್ ಯಾವಾಗಲೂ ಚರ್ಚೆಯಾಗುತ್ತವೆ. ವದಂತಿಗಳು ಕೂಡ ಕಾಳ್ಗಿಚ್ಚಿನಂತೆ ಹರಡುತ್ತವೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಅವರ ಹೆಸರುಗಳು ಈ ಸಾಲಿನಲ್ಲಿ ಕೇಳಿಬರುತ್ತಿದೆ. ಇವರಿಬ್ಬರ ಸಂಬಂಧದ ಸುದ್ದಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವಿಶ್ವಕಪ್ ಪಂದ್ಯ ನಡೆಯುವಾಗಲೂ ಸಾರಾ ತೆಂಡೂಲ್ಕರ್ ಆಗಾಗ ಶುಭಮನ್ ಗಿಲ್ ಅವರನ್ನು ಬೆಂಬಲಿಸುತ್ತಿದ್ದರು. ಪಂದ್ಯ ಮುಗಿದ ತಕ್ಷಣ, ಇನ್ನೂ ಹಲವು ವದಂತಿಗಳು ಹೊರಬಂದವು. ಇದೀಗ ಶುಭಮನ್ ಗಿಲ್ ಅವರ ಇತ್ತೀಚಿನ ಫೋಟೋಗಳು ಹೊರಬಂದಿವೆ. ಆದರೆ ಈ ಫೋಟೋಗಳನ್ನು ನೋಡಿದ ನಂತರ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ಏಕೆಂದರೆ ಈ ಫೋಟೋಗಳಲ್ಲಿ, ಶುಭಮನ್ ಸಾರಾ ತೆಂಡೂಲ್ಕರ್ ಜೊತೆ ಅಲ್ಲ, ನಟಿ ಅವನೀತ್ ಕೌರ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಈಗ ಅಭಿಮಾನಿಗಳಿಗೆ ತಿಳಿಯಬೇಕಿದೆ.
ಲಂಡನ್ನಲ್ಲಿ ಸುತ್ತಾಡುತ್ತಿದ್ದಾರೆ ಶುಭ್ಮನ್
ಇತ್ತೀಚೆಗೆ ಈ ಫೋಟೋಗಳು ಹೊರಬಂದಿದ್ದು, ಇದರಲ್ಲಿ ಅವನೀತ್ ಕೌರ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ಲಂಡನ್ನ ಬೀದಿಗಳಲ್ಲಿ ಒಟ್ಟಿಗೆ ತಿರುಗುತ್ತಿರುವುದನ್ನು ಕಾಣಬಹುದು. ವಿಶೇಷವೆಂದರೆ ಈ ಫೋಟೋಗಳಲ್ಲಿ ಅವನೀತ್ ಮತ್ತು ಶುಭ್ಮನ್ ಇಬ್ಬರೇ ಅಲ್ಲ. ಅವರೊಂದಿಗೆ ಇನ್ನೂ ಅನೇಕ ಸ್ನೇಹಿತರನ್ನು ಕಾಣಬಹುದು. ಆದರೆ ಸ್ನೇಹಿತರಿದ್ದರೂ ಜನರ ಗಮನವು ಅವನೀತ್ ಜೊತೆ ಇರುವ ಫೋಟೋಗಳ ಮೇಲೆ ಹೋಗುತ್ತಿದೆ. ಈ ಎಲ್ಲ ಫೋಟೋಗಳು ಗ್ರೂಪ್ ಫೋಟೋಗಳಾಗಿವೆ. ಇವುಗಳಲ್ಲಿ ಶುಭ್ಮನ್ ಗಿಲ್ ಕಂದು ಬಣ್ಣದ ಉದ್ದನೆಯ ಬ್ಲೇಜರ್ ಅನ್ನು ಧರಿಸಿದ್ದಾರೆ. ಅವನೀತ್ ಕಪ್ಪು ಬಣ್ಣದ ಉದ್ದನೆಯ ಕೋಟ್ , ಎತ್ತರದ ಬೂಟುಗಳನ್ನು ಧರಿಸಿದ್ದಾರೆ. ಈ ಫೋಟೋಗಳಲ್ಲಿ ಅಂಶುಲ್ ಮತ್ತು ರಾಘವ್ ಕೂಡ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ನಡುವೆ ನಡುವೆ ಏನಿಲ್ಲಾ ಅಂದುಕೊಳ್ಳುತ್ತಿದ್ದಾರೆ. ಏಕೆಂದರೆ ಇಬ್ಬರೂ ಇಲ್ಲಿಯವರೆಗೆ ಏನನ್ನೂ ಹೇಳಿಲ್ಲ. ಅಂದಹಾಗೆ ಅವನೀತ್ ಜೊತೆ ಶುಭ್ಮನ್ ಕಾಣಿಸಿಕೊಂಡಿರುವುದಕ್ಕೆ ಬೇರೆಯೇ ಕಾರಣವಿದೆ ಅಂತೆ. ಇಬ್ಬರೂ ಒಟ್ಟಿಗೆ ಮ್ಯೂಸಿಕ್ ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಸಾಕಷ್ಟು ಗುಸುಗುಸು ಇದೆ. ಹೌದು, ಕ್ರಿಕೆಟಿಗ ಈಗ ನಟನೆಯ ಲೋಕಕ್ಕೂ ಕಾಲಿಡಲು ಹೊರಟಿದ್ದಾರೆ. ಈ ಮ್ಯೂಸಿಕ್ ವಿಡಿಯೋ ಮೂಲಕ ಅವರು ನಟನಾ ಕ್ಷೇತ್ರಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.
ರಿಲೇಶನ್ಶಿಪ್ ರೂಮರ್ಸ್
ಭಾರತದ ವಿಶ್ವಕಪ್ ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಮತ್ತು ಶುಭ್ಮನ್ ನಡುವಿನ ರಿಲೇಶನ್ಶಿಪ್ ಬಗ್ಗೆ ಸಾಕಷ್ಟು ರೂಮರ್ಸ್ ಹರಿದಾಡಿದವು. ಮೈದಾನದಲ್ಲಿ ಸಾರಾ ತೆಂಡೂಲ್ಕರ್ ಅವರ ಘೋಷಣೆಗಳು ಕೂಡ ಕೇಳಿಬಂದವು. ಇಷ್ಟು ಮಾತ್ರವಲ್ಲದೆ, ಜಿಯೋ ಪ್ಲಾಜಾದ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡರು, ಈ ಸಮಯದಲ್ಲಿ ಇಬ್ಬರೂ ಮಾಧ್ಯಮಗಳಿಂದ ದೂರವಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದಕ್ಕೂ ಮುನ್ನ ಇಬ್ಬರ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆಗಳೂ ಸುದ್ದಿಯಲ್ಲಿವೆ. ‘ಕಾಫಿ ವಿತ್ ಕರಣ್ 8’ ನಲ್ಲಿ ಚಿರಾಗ್ ಸೂರಿ ಮತ್ತು ಸಾರಾ ಅಲಿ ಖಾನ್ ಅವರ ಪ್ರತಿಕ್ರಿಯೆಯು ಈ ಇಡೀ ವಿಷಯಕ್ಕೆ ಹೆಚ್ಚಿನ ಹೈಪ್ ನೀಡಿದೆ.
ಪುಣೆಯಲ್ಲಿ ಮಕ್ಕಳೇ ತುಂಬಿದ್ದ ಶಾಲಾ ಬಸ್ ಮರಕ್ಕೆ ಡಿಕ್ಕಿ; ವಿಡಿಯೋ ವೈರಲ್