ಚಿಕ್ಕಪಡಸಲಗಿ : ಮಹಾರಾಷ್ಟ್ರದ ಕೃಷ್ಣಾ ಜಲಾಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗ್ರಾಮದ ಚಿಕ್ಕಪಡಸಲಗಿ ಶ್ರಮಬಿಂದು ಸಾಗರಕ್ಕೆ ಅಂದಾಜು 1 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಅಂದಾಜು 4 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಬ್ಯಾರೇಜ್ ಬೇಸಿಗೆಯಲ್ಲಿ ನೀರು ಸಂಗ್ರಹಿಸುತ್ತಾರೆ.
ಜಮಖಂಡಿ ನಗರ ಸೇರಿ ನದಿ ತೀರದ ಗ್ರಾಮಗಳಾದ ಚಿಕ್ಕಪಡಸಲಗಿ, ಆಲಗೂರ, ನಾಗನೂರ, ಹಿರೇಪಡಸಲಗಿ, ಜಂಬಗಿ, ಶೂರ್ಪಾಲಿ, ಮುತ್ತೂರ, ಕಂಕಣವಾಡಿ, ಮೈಗೂರ, ಅಥಣಿ ತಾಲೂಕಿನ ಗ್ರಾಮಗಳಾದ ಸವದಿ, ಝುಂಜರವಾಡ ಮತ್ತಿತರ ಗ್ರಾಮಗಳಿಗೆ ಈ ಬ್ಯಾರೇಜ್ ನೀರೇ ಜೀವಜಲವಾಗಿರುತ್ತದೆ.
ಈ ಬೇಸಿಗೆಯಲ್ಲಿ ಕೃಷ್ಣೆಯ ಒಡಲು ನೀರಿಲ್ಲದೆ ಬರಿದಾಗಿತ್ತು. ಇದರಿಂದ ರೈತರ ಬೆಳೆಗಳು ನೀರಿನಲ್ಲದೆ ಒಣಗುತ್ತಿದ್ದವು. ಸದ್ಯ ಕೃಷ್ಣಾ ಕಣಿವೆಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ನೀರಿನ ಹರಿವಿನಲ್ಲಿ ಏರಿಕೆಯಾಗಿದೆ.
ಶುಕ್ರವಾರದ ಹೊತ್ತಿಗೆ ಆಲಮಟ್ಟಿ ಡೆಡ್ ಸ್ಟೋರೇಜ್ನಲ್ಲಿ ನದಿಗೆ ನೀರು ತುಂಬಿ ಚಿಕ್ಕಪಡಸಲಗಿ ಶ್ರಮಬಿಂದು ಸಾಗರ ಗುರುವಾರ ರಾತ್ರಿ ಸಂಪೂರ್ಣ ಜಲಾವೃತಗೊಂಡಿದೆ.