ಬೆಂಗಳೂರು: ಶಾಪಿಂಗ್ ಕಾಂಪ್ಲೆಕ್ಸ್ಗೆ ನುಗ್ಗಿದ ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಚಾಲಕ ಮತ್ತು ಕ್ಲೀನರ್ನನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಾಲಕ ಮೃತ ಪಟ್ಟಿದ್ದಾನೆ.
ದೊಡ್ಡಬೊಮ್ಮಸಂದ್ರದ ವಿದ್ಯಾರಣ್ಯಪುರದ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಕಾಂಪ್ಲೆಕ್ಸ್ಗೆ ಗುದ್ದಿದ ರಭಸಕ್ಕೆ ಟ್ರಕ್ ನಜ್ಜುಗುಜ್ಜಾಗಿತ್ತು. ಟ್ರಕ್ ಒಳಗೆ ಸಿಲುಕಿದ್ದ ಚಾಲಕ ಮತ್ತು ಕ್ಲೀನರ್ನನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹೊರತೆಗೆದರು.
ಟಿಪ್ಪರ್ ಲಾರಿ ಚಾಲಕ ತೇಜಸ್ (32) ಮೃತಪಟ್ಟಿದ್ದು, ಕ್ಲೀನರ್ ಮಲ್ಲಪ್ಪನನ್ನು(23) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಚಾಲಕನ ಬದಲಾಗಿ ಕ್ಲೀನರ್ ಮಲ್ಲಪ್ಪ ಲಾರಿ ಚಾಲನೆ ಮಾಡುತ್ತಿದ್ದ. ಹಾಗಾಗಿ ಅವಘಡ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಟ್ರಕ್ ತೆರವು ಕಾರ್ಯಾಚರಣೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್)