More

    ‘ಪಾರ್ವತಿ’ಯನ್ನು ದತ್ತು ಪಡೆದ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​

    ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್​ ಇದೀಗ ಆನೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಂದರೆ, ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.

    ಈ ಮೊದಲು ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ನಟ ಚಿಕ್ಕಣ್ಣ ಸೇರಿ ಕ್ರಿಕೆಟರ್​ಗಳಾದ ಎಂ.ಎಸ್​ ಧೋನಿ, ಜಾವಗಲ್​ ಶ್ರೀನಾಥ್​, ಜಹೀರ್​ ಖಾನ್​, ಅನಿಲ್​​ ಕುಂಬ್ಳೆ ಹಾಗೂ ಹಲವು ರಾಜಕಾರಣಿಗಳೂ ಸಂಗ್ರಹಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

    ಇದನ್ನೂ ಓದಿ: ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್​ ಕುಮಾರ್ ಸಹೋದರ ನಿಧನ

    ಇದೀಗ ಆ ಸಾಲಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಸಹ ಸೇರ್ಪಡೆಯಾಗಿದ್ದು, ಆಗಸ್ಟ್​ 20ರಿಂದ 2021ರ ಆಗಸ್ಟ್ 19ರ ವರೆಗೂ ಆ ಆನೆ ಶಿವಣ್ಣ ದತ್ತು ಪಡೆದಿದ್ದಾರೆ. ಅದರ ಆರೈಕೆಗೆ ಒಟ್ಟು 75 ಸಾವಿರ ರೂ ಮೊತ್ತವನ್ನೂ ನೀಡಿದ್ದಾರೆ.

    ಇದನ್ನೂ ಓದಿ: Video: ಟ್ರೆಕ್ಕಿಂಗ್​ ವೇಳೆ ಮಣ್ಣಲ್ಲಿ ಸಿಲುಕಿದ ಪ್ರಜ್ವಲ್​ ದೇವರಾಜ್​ ಜಿಪ್ಸಿ!

    ಪ್ರಾಣಿ ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಈ ವಿಚಾರವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ಶಿವರಾಜ್​ಕುಮಾರ್ ಅವರ ಆನೆ ದತ್ತು ಪಡೆಯುವಿಕೆ ಸಾಕಷ್ಟು ಮಂದಿಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.

    ನನ್ನ ಮುಂದಿನ ಚಿತ್ರಕ್ಕೂ ನೀವೇ ಹಾಡ್ತೀರಾ ಅಂತ ನಂಬಿಕೆ ಇದೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts