ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಇದೀಗ ಆನೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅಂದರೆ, ಮೈಸೂರು ಪ್ರಾಣಿ ಸಂಗ್ರಹಾಲಯದಲ್ಲಿನ ಪಾರ್ವತಿ ಹೆಸರಿನ ಹೆಣ್ಣು ಆನೆಯೊಂದನ್ನು ದತ್ತು ಪಡೆದುಕೊಂಡಿದ್ದಾರೆ.
ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ನಟ ಚಿಕ್ಕಣ್ಣ ಸೇರಿ ಕ್ರಿಕೆಟರ್ಗಳಾದ ಎಂ.ಎಸ್ ಧೋನಿ, ಜಾವಗಲ್ ಶ್ರೀನಾಥ್, ಜಹೀರ್ ಖಾನ್, ಅನಿಲ್ ಕುಂಬ್ಳೆ ಹಾಗೂ ಹಲವು ರಾಜಕಾರಣಿಗಳೂ ಸಂಗ್ರಹಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕರೊನಾದಿಂದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಸಹೋದರ ನಿಧನ
ಇದೀಗ ಆ ಸಾಲಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಹ ಸೇರ್ಪಡೆಯಾಗಿದ್ದು, ಆಗಸ್ಟ್ 20ರಿಂದ 2021ರ ಆಗಸ್ಟ್ 19ರ ವರೆಗೂ ಆ ಆನೆ ಶಿವಣ್ಣ ದತ್ತು ಪಡೆದಿದ್ದಾರೆ. ಅದರ ಆರೈಕೆಗೆ ಒಟ್ಟು 75 ಸಾವಿರ ರೂ ಮೊತ್ತವನ್ನೂ ನೀಡಿದ್ದಾರೆ.
ಇದನ್ನೂ ಓದಿ: Video: ಟ್ರೆಕ್ಕಿಂಗ್ ವೇಳೆ ಮಣ್ಣಲ್ಲಿ ಸಿಲುಕಿದ ಪ್ರಜ್ವಲ್ ದೇವರಾಜ್ ಜಿಪ್ಸಿ!
ಪ್ರಾಣಿ ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ಶಿವರಾಜ್ಕುಮಾರ್ ಅವರ ಆನೆ ದತ್ತು ಪಡೆಯುವಿಕೆ ಸಾಕಷ್ಟು ಮಂದಿಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.