More

    ಶಿವ ನಾಮಸ್ಮರಣೆಯೇ ಆನಂದ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಈಶ್ವರನ ನಾಮಸ್ಮರಣೆಯಲ್ಲಿ ಸಿಗುವ ಆನಂದ ಇನ್ಯಾವುದರಲ್ಲೂ ಸಿಗುವುದಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
    ದುರ್ಗಿಗುಡಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಸಪ್ತಾಹದ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಬ್ರಹ್ಮಕುಮಾರಿಯವರು ಎಲ್ಲರನ್ನೂ ಶಿವಸ್ತುತಿಯಲ್ಲಿ ಪಾಲ್ಗೊಳ್ಳುವ ಮಹತ್ಕಾರ್ಯ ಮಾಡುತ್ತಿದ್ದಾರೆ ಎಂದರು.
    ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್ ಮಾತನಾಡಿ, ಈಗಿನ ಒತ್ತಡದ ಜೀವನದಲ್ಲಿ ಧ್ಯಾನ ಅತ್ಯಗತ್ಯವಾಗಿದೆ. ಧ್ಯಾನದಿಂದ ಒತ್ತಡ ಮುಕ್ತವಾಗುತ್ತದೆ. ಪ್ರತಿದಿನ ಓಂಕಾರ ಸ್ವರದ ಉಚ್ಛರಣೆಯಿಂದ ಹಲವಾರು ರೋಗಗಳಿಂದ ಮುಕ್ತರಾಗಬಹುದು ಎಂದರು.
    ಸರ್ಜಿ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಮಾತನಾಡಿ, ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯವು ಮನುಕುಲದ ಒಳಿತಿಗಾಗಿ ಕೋಟ್ಯಂತರ ಜನರ ಮನಸ್ಸಿನಲ್ಲಿ ಶಾಂತಿಯ ಬೀಜವನ್ನು ಬಿತ್ತುವಂತಹ ಮಹತ್ಕಾರ್ಯ ಮಾಡುತ್ತಿದೆ. ಮಾನವ ನಾನು ಎಂಬ ಅಹಂಕಾರ ತ್ಯಜಿಸಬೇಕು ಎಂದರು.
    ಗೌರವ ಸಮರ್ಪಣೆ ಸ್ವೀಕರಿಸಿದ ಪರಿಸರ ಪ್ರೇಮಿ ಬಾಲಕೃಷ್ಣ ಅವರು ಪರಿಸರ ಜಾಗೃತಿ ಯೋಜನೆಗಳ ಅರಿವು ನೀಡಿದರು. ವಿಶ್ವದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಅನುಸೂಯಾ, ಬಿ.ಎಚ್.ಮಂಜಪ್ಪ ಉಪಸ್ಥಿತರಿದ್ದರು. ನಟನಂ ಬಾಲ ನಾಟ್ಯ ಕೇಂದ್ರದಿಂದ ಶಿವಸ್ಥುತಿ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts