More

    ಶಿವಮೊಗ್ಗದಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ

    ಶಿವಮೊಗ್ಗ: ಎಸ್‌ಎಎಎಸ್(ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ)ನಿಂದ ಶುಭಮಂಗಳ ಸಮುದಾಯ ಭವನದಲ್ಲಿ ಡಿ.16ರ ಸಂಜೆ 6ಕ್ಕೆ ಅಯ್ಯಪ್ಪಸ್ವಾಮಿ ಪಡಿಪೂಜೆ ಹಾಗೂ ಶಕ್ತಿಪೂಜೆ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ಸದಸ್ಯ ಕೆ.ಈ. ಕಾಂತೇಶ್ ತಿಳಿಸಿದರು.
    ಶಬರಿಮಲೈನಿಂದ ತಂತ್ರಿಗಳು ಆಗಮಿಸಿ ಪಡಿಪೂಜೆ ನೆರವೇರಿಸುತ್ತಿರುವುದು ವಿಶೇಷವಾಗಿದೆ. ಅಯ್ಯಪ್ಪಸ್ವಾಮಿ ಭಕ್ತರಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಶಬರಿಮಲೈನಲ್ಲಿ ನಡೆಯುವ ಮಾದರಿಯಲ್ಲೇ ನಗರದಲ್ಲೂ ಪಡಿಪೂಜೆ ನಡೆಸಲಾಗುತ್ತಿದೆ. ಇದರಲ್ಲಿ ಸಾವಿರಕ್ಕೂ ಅಧಿಕ ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಭಾಗವಹಿಸಲಿದ್ದಾರೆ. ಪಡಿಪೂಜೆ ಬಳಿಕ ಭಕ್ತರು ಭಜನೆ ನಡೆಸಿಕೊಡಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಎಸ್‌ಎಎಎಸ್ ಸಂಘಟನೆ 18 ವರ್ಷಗಳಿಂದ ರಾಷ್ಟ್ರಾದ್ಯಂತ ಧಾರ್ಮಿಕ, ಸಾಮಾಜಿಕ ಸೇವೆಗಳನ್ನು ನಡೆಸುತ್ತಿದೆ. ಶಬರಿಮಲೈ ಯಾತ್ರಾರ್ಥಿಗಳಿಗೆ ಸನ್ನಿದಾನದಲ್ಲಿ ನೀಡುವ ಅನ್ನದಾನಕ್ಕಾಗಿ ಶಿವಮೊಗ್ಗ ನಗರ ಘಟಕವು ಮುಷ್ಟಿ ಅಕ್ಕಿ ಯೋಜನೆಯನ್ನು ಹಮ್ಮಿಕೊಂಡಿತ್ತು. ನಗರದ 80 ಸಾವಿರಕ್ಕೂ ಅಧಿಕ ಮನೆಗಳನ್ನು ಸಂಪರ್ಕಿಸಿ, 43ಸಾವಿರ ಕೆಜಿ ಅಕ್ಕಿಯನ್ನು ಸಂಗ್ರಹಿಸಿ ಇತ್ತೀಚೆಗೆ ಶಬರಿಮಲೈಗೆ ಕಳುಹಿಸಲಾಗಿದೆ ಎಂದರು.
    ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಳೆಗುಂಡಿ, ಜಿಲ್ಲಾಧ್ಯಕ್ಷ ಸಂತೋಷ್, ಸದಸ್ಯರಾದ ಎನ್.ಡಿ. ಸತೀಸ್, ವಿಶ್ವಾಸ್, ಮಂಜುನಾಥ್, ಶಂಕರ್, ಕೆ.ವಿ.ಅಣ್ಣಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts