More

    ಶಿವಮೊಗ್ಗಕ್ಕೆ ಒಂದೇ ಕಾಪ್ಟರ್‌ನಲ್ಲಿ ಸಿಎಂ, ಮಾಜಿ ಸಿಎಂ !

    ಶಿವಮೊಗ್ಗ: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಭಾನುವಾರ ಶಿವಮೊಗ್ಗಕ್ಕೆ ಬಂದಿಳಿದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿಂದ ಒಂದೇ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು…
    ಅರರೇ… ಇದೇನಿದು, ರಾಜಕೀಯ ಬದ್ಧ ವೈರಿಗಳು ಒಂದೇ ಹೆಲಿಪಾಕ್ಟರ್‌ನಲ್ಲಿ ಬಂದಿಳಿದರಾ ಎಂಬ ಅಚ್ಚರಿಪಡುವ ಅಗತ್ಯವಿಲ್ಲ. ಹೆಲಿಕಾಪ್ಟರ್ ಒಂದೇ ಆದರೋ ಬಂದಿಳಿದ ಸಮಯ ಮಾತ್ರ ಬೇರೆ ಬೇರೆಯಾಗಿದೆ.
    ಹೌದು, ತರಿಕೆರೆ ಮಾಜಿ ಶಾಸಕ ಶ್ರೀನಿವಾಸ್ ಪುತ್ರಿಯ ಮದುವೆ ಶಿವಮೊಗ್ಗದ ಸರ್ಜಿ ಕಲ್ಯಾಣಮಂಟಪದಲ್ಲಿ ಭಾನುವಾರ ನಿಗದಿಯಾಗಿತ್ತು. ಹಾಗಾಗಿ ಸಿದ್ದರಾಮಯ್ಯ ಅವರಿಗೆ ವಿಟಿ-ಎಚ್‌ಕೆಬಿ ಹೆಸರಿನ ಹೆಲಿಕಾಪ್ಟರ್‌ಗೆ ಮೊದಲೇ ಬುಕ್ ಆಗಿತ್ತು. ಭಾನುವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನಿಂದ ಹೊರಡಬೇಕಿತ್ತು.
    ಆದರೆ ಭಾನುವಾರ ಬೆಳಗ್ಗೆ ದಿಢೀರ್ ಆಗಿ ಸಿಎಂ ಯಡಿಯೂರಪ್ಪ ಅವರಿಗೆ ಶಿವಮೊಗ್ಗಕ್ಕೆ ಬರಲು ಅದೇ ಹೆಲಿಕಾಪ್ಟರ್ ಬುಕ್ ಮಾಡಲಾಗಿತ್ತು. ಹಾಗಾಗಿ ಸಿಎಂ ಅವರನ್ನು ಬೆಳಗ್ಗೆ 8.40ಕ್ಕೆ ಕರೆತಂದ ಕಾಪ್ಟರ್, ಮತ್ತೆ ಬೆಂಗಳೂರಿಗೆ ಮರಳಿ ಸಿದ್ದರಾಮಯ್ಯ ಅವರನ್ನು ಮಧ್ಯಾಹ್ನ 12.05ಕ್ಕೆ ಕರೆತಂದಿತು.
    ಸಿಎಂ ಭಾನುವಾರ ಶಿವಮೊಗ್ಗದಲ್ಲೇ ವಾಸ್ತವ್ಯ ಹೂಡಲಿದ್ದು ಕಾಪ್ಟರ್ ಮಧ್ಯಾಹ್ನ 3.30ಕ್ಕೆ ಸಿದ್ದರಾಮಯ್ಯ ಅವರನ್ನು ಬದಾಮಿಗೆ ಕರೆದೊಯ್ಯಲಿದೆ. ಆನಂತರ ಸೋಮವಾರ ಬೆಳಗ್ಗೆ 9ಕ್ಕೆ ಶಿವಮೊಗ್ಗಕ್ಕೆ ಅದೇ ಕಾಪ್ಟರ್ ಬಂದು ಸಿಎಂ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts