More

    ಕುರಿ ಕಳ್ಳರ ಬಂಧನ

    ಹಿರೇಕೆರೂರ: ತಾಲೂಕಿನ ವರಹ ಗ್ರಾಮದ ಅರಣ್ಯದಲ್ಲಿ ಕುರಿ ಕದಿಯಲು ಬಂದು ಕುರಿಗಾಹಿ ಹಾಗೂ ಇಬ್ಬರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ ಕಳ್ಳರನ್ನು ಪೊಲೀಸರು ಬಂಧಿಸಿದ ಘಟನೆ ಗುರುವಾರ ನಡೆದಿದೆ.

    ಬೆಳಗಾವಿ ಜಿಲ್ಲೆಯ ಕಬ್ಬೂರು ಗ್ರಾಮದ ನಿವಾಸಿ ರಾಯಪ್ಪ ಸಿದ್ದರಾಮಪ್ಪ ದಳವಾಯಿ ಹಾಗೂ ವರಹ ಗ್ರಾಮದ ಇಬ್ಬರು ಗಾಯಗೊಂಡವರು.

    ರಾಯಪ್ಪ ದಳವಾಯಿ ಅವರು ಒಂದು ವಾರದಿಂದ ತನ್ನ ಹೆಂಡತಿ, ಮಕ್ಕಳೊಂದಿಗೆ ವರಹ ಗ್ರಾಮದ ಅರಣ್ಯದಲ್ಲಿ ಕುರಿ ಮೇಯಿಸಲು ತಂಗಿದ್ದರು. ಈ ವೇಳೆ ಕಳ್ಳರು 12 ಕುರಿಗಳ ಕಾಲು ಕಟ್ಟಿ ತಗ್ಗು ಪ್ರದೇಶದಲ್ಲಿ ಬಚ್ಚಿಡಲು ಮುಂದಾಗಿದ್ದನ್ನು ಕಂಡ ಕುರಿಗಾಹಿ ರಾಯಪ್ಪ ಅವರ ಮೇಲೆ ಕಳ್ಳರು ಬಡಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನು ಬಿಡಿಸಲು ಮುಂದಾದ ವರಹ ಗ್ರಾಮದ ಇಬ್ಬರ ಮೇಲೂ ಕಳ್ಳರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಒಬ್ಬ ಕಳ್ಳನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪಿಎಸ್​ಐ ದೀಪು ಎಂ.ಟಿ., ಸಿಪಿಐ ಮಂಜುನಾಥ ಪಂಡಿತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ದೇವಲೆಪ್ಪ ಬಾಬು ಚಿಕ್ಕಮಾಗಡಿ, ಕುಮಾರ ಸೈನಪ್ಪ ಲಮಾಣಿ, ಶಾಲು ಲಮಾಣಿ, ದೇವರಾಜ ಚಂದ್ರಪ್ಪ ಲಮಾಣಿ, ಜಯಪ್ಪ ದಾನಪ್ಪ ಲಮಾಣಿ, ಜಾಕಳಿ ಶಂಕ್ರಪ್ಪ ಲಮಾಣಿ ಬಂಧಿತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts