ಚೆನ್ನೈ: ಕೆಲವು ವರ್ಷಗಳಿಂದ ಪ್ಯಾನ್ ಇಂಡಿಯಾ ಚಿತ್ರಗಳು ಟ್ರೆಂಡ್ ನಡೆಯುತ್ತಿದೆ. ಇದುವರೆಗೂ ಎಸ್.ಎಸ್. ರಾಹಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರವೇ ಭಾರತದ ಅತೀ ದೊಡ್ಡ ಮತ್ತು ಅತೀ ಹೆಚ್ಚು ಬಜೆಟ್ನ ಪ್ಯಾನ್ ಇಂಡಿಯಾ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಆ ದಾಖಲೆಯನ್ನು ತಮಿಳು ನಿರ್ದೇಶಕ ಶಂಕರ್ ಮುರಿಯುವುದಕ್ಕೆ ಹೊರಟಿದ್ದಾರೆ.
ಇದನ್ನೂ ಓದಿ: ನಾನಿನ್ನೂ ಸತ್ತಿಲ್ಲ; ತಮ್ಮ ಅನಾರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರ ಬಗ್ಗೆ ಸಮಂತಾ ಬೇಸರ
ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದಲ್ಲಿ ‘ಅನ್ನಿಯನ್’ ಚಿತ್ರವನ್ನು ಶಂಕರ್, ಹಿಂದಿಗೆ ರೀಮೇಕ್ ಮಾಡುವುದಕ್ಕೆ ಹೊರಟಿರುವುದು ಹಳೆಯ ವಿಷಯ. ಈಗ ಆ ಚಿತ್ರವನ್ನು ಪಕ್ಕಕ್ಕಿಟ್ಟಿರುವ ಶಂಕರ್, ಅದಕ್ಕೂ ಮೊದಲು ಇನ್ನೊಂದು ಚಿತ್ರವನ್ನು ಕೈಗೆತ್ತಿಕೊಳ್ಳುತ್ತಿದ್ದಾರಂತೆ. ಈ ಚಿತ್ರದ ವಿಶೇಷ ಏನು ಗೊತ್ತಾ? ತಮಿಳು ಸಾಹಿತ್ಯದಲ್ಲೇ ದೊಡ್ಡ ಹೆಸರು ಮಾಡಿರುವ ವೆಲ್ಪರಿ ಎಂಬ ಐತಿಹಾಸಿಕ ಕಾದಂಬರಿಯನ್ನು ಈ ಚಿತ್ರ ಆಧರಿಸಲಿದೆ.
ಸು. ವೆಂಕಟೇಶನ್ ಎನ್ನುವವರು ಬರೆದಿರುವ ‘ವೆಲ್ಪರಿ’ ಕಾದಂಬರಿಯು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ಸುಮಾರು ಆರು ವರ್ಷಗಳ ಕಾಲ ವೆಂಕಟೇಶನ್ ಅವರು ಸಾಕಷ್ಟು ರೀಸರ್ಚ್ ಮಾಡಿ ಈ ಕಾದಂಬರಿಯನ್ನು ಬರೆದಿದ್ದು, ಇದು ತಮಿಳು ಸಾಹಿತ್ಯ ಬಹಳ ಪ್ರಮುಖವಾದ ಕಾದಂಬರಿ ಎಂದು ಹೇಳಲಾಗುತ್ತಿದೆ. ಈ ಕಾದಂಬರಿಯನ್ನು ಮೂಲವಾಗಿಟ್ಟುಕೊಂಡು ಶಂಕರ್, ಮೂರು ಭಾಗಗಳ ಚಿತ್ರಗಳನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕಾದಂಬರಿಯಲ್ಲಿ ಎಲ್ಲವೂ ಇದೆಯಂತೆ. ಒಂದು ಅದ್ಭುತವಾದ ಪ್ರೇಮಕಥೆಯ ಜತೆಗೆ ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆಯಂತೆ. ಇನ್ನು, ಗ್ರಾಫಿಕ್ಸ್ ಸಹ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆಯಂತೆ. ಇಷ್ಟೆಲ್ಲ ಗುಣಗಳಿರುವುದರಿಂದಲೇ ಈ ಚಿತ್ರವನ್ನು ಶಂಕರ್ ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಿದ್ದು, ಈಗಾಗಲೇ ಚಿತ್ರದ ಕೆಲಸಗಳನ್ನು ಅವರು ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ‘ಕಾಂತಾರ’ ಸಹ ನನ್ನ ಚಿತ್ರವೇ ಎಂದ ಯಶ್
ಅಂದಹಾಗೆ, ‘ವೆಲ್ಪರಿ’ ಚಿತ್ರೀಕರಣ ಶುರುವಾಗುವುದಕ್ಕೆ ಒಂದಿಷ್ಟು ಸಮಯವಿದೆ. ಮೊದಲಿಗೆ ಶಂಕರ್, ರಾಮ್ಚರಣ್ ತೇಜ ಅಭಿನಯದ ಚಿತ್ರ ಮುಗಿಸಬೇಕು. ಆ ನಂತರ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಬಿಡುಗಡೆ ಮಾಡಬೇಕು. ಆಮೇಲಷ್ಟೇ ಈ ಚಿತ್ರ ಪ್ರಾರಂಭವಾಗಲಿದೆ.