ಮುಂಬೈ: ಸುಮಾರು 20 ವರ್ಷಗಳ ಹಿಂದೆ ದೇವದಾಸ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು ಶಾರೂಖ್ ಖಾನ್ ಮತ್ತು ಸಂಜಯ್ ಲೀಲಾ ಬನ್ಸಾಲಿ. ಈ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆಯೇ, ಅವರಿಬ್ಬರೂ ಮತ್ತೊಮ್ಮೆ ಜತೆಯಾಗಿ ಕೆಲಸ ಮಾಡುವ ಪ್ರಯತ್ನಗಳಾದವು. ಆದರೆ, ಅದ್ಯಾಕೋ ಕೈಗೂಡಿಬರಲೇ ಇಲ್ಲ.
ಇದನ್ನೂ ಓದಿ: ಇದು ನಮಿತಾ ಥಿಯೇಟರ್: ನೈಜ ಘಟನೆ ಆಧರಿತ ಕಥೆಗಳು ಇದರ ವಿಶೇಷತೆ
ಮೂಲಗಳ ಪ್ರಕಾರ ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳಲ್ಲಿ ನಟಿಸುವುದಕ್ಕೆ ಮೊದಲಿಗೆ ಶಾರೂಖ್ಗೆ ಆಫರ್ ಕೊಟ್ಟಿದ್ದರಂತೆ ಬನ್ಸಾಲಿ. ಇದಲ್ಲದೆ ಹಮ್ ದಿಲ್ ದೇ ಚುಕೇ ಸನಮ್ 2 ಮತ್ತು ಸಾಹಿರ್ ಲುಧಿಯಾನ್ವಿ ಬಯೋಪಿಕ್ನಲ್ಲೂ ನಟಿಸುವುದಕ್ಕೆ ಆಫರ್ ಕೊಟ್ಟಿದ್ದರಂತೆ. ಆದರೆ, ಕಾರಣಾಂತರಗಳಿಂದ ವರ್ಕೌಟ್ ಆಗಲಿಲ್ಲ ಮತ್ತು ಅವರಿಬ್ಬರೂ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವುದಕ್ಕೆ ಅವಕಾಶವೇ ಸಿಗಲಿಲ್ಲ.
ಇದೀಗ ಇಜ್ಹಾರ್ ಎಂಬ ಹೊಸ ಚಿತ್ರದಲ್ಲಿ ಶಾರೂಖ್ ಖಾನ್ ಅವರನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕಥೆಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಬರೆದಿಟ್ಟುಕೊಂಡಿದ್ದರಂತೆ ಬನ್ಸಾಲಿ. ಇದೊಂದು ನೈಜ ಘಟನೆಯಾಗಿದ್ದು, ಭಾರತೀಯನೊಬ್ಬ ತಾನು ಪ್ರೀತಿಸುವ ಹುಡುಗಿಯನ್ನು ಹುಡುಕಿಕೊಂಡು ನಾರ್ವೆವರೆಗೂ ಸೈಕಲ್ನಲ್ಲಿ ಪ್ರಯಾಣ ಮಾಡುವ ಕಥಾನಕ ಈ ಚಿತ್ರದಲ್ಲಿದೆಯಂತೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಅನ್ಲಿಮಿಟೆಡ್ ಮನರಂಜನೆ
ಈ ಘಟನೆಯನ್ನಿಟ್ಟುಕೊಂಡು ಬನ್ಸಾಲಿ ಚಿತ್ರಕಥೆ ಬರೆದಿದ್ದು, ಶಾರೂಖ್ ಖಾನ್ಗೆ ನರೇಶನ್ ಕೊಟ್ಟಿದ್ದಾರಂತೆ. ಆದರೆ, ಸದ್ಯ ಪಠಾಣ್ ಚಿತ್ರದಲ್ಲಿ ನಟಿಸುತ್ತಿರುವ ಶಾರೂಖ್, ಆ ನಂತರ ರಾಜಕುಮಾರ್ ಹಿರಾನಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಒಪ್ಪಿರುವ ಚಿತ್ರಗಳು ಮುಗಿಯುವುದಕ್ಕೆ ಇನ್ನೊಂದು ವರ್ಷವಾದರೂ ಬೇಕು. ಆ ನಂತರ ಬನ್ಸಾಲಿಗೆ ಶಾರೂಖ್ ಕಾಲ್ಶೀಟ್ ಕೊಡುತ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಇನ್ನೆಷ್ಟು ಸಮಯ ಬೇಕೋ ಗೊತ್ತಿಲ್ಲ?
ಕಂಗನಾಗೆ ಪಾಸಿಟಿವ್ … ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ ನಟಿ