More

    ಪ್ರೀತಿಗಾಗಿ ನಾರ್ವೆವರೆಗೂ ಸೈಕಲ್ ಓಡಿಸ್ತಾರಾ ಶಾರೂಖ್ ಖಾನ್?

    ಮುಂಬೈ: ಸುಮಾರು 20 ವರ್ಷಗಳ ಹಿಂದೆ ದೇವದಾಸ್​ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದರು ಶಾರೂಖ್​ ಖಾನ್​ ಮತ್ತು ಸಂಜಯ್​ ಲೀಲಾ ಬನ್ಸಾಲಿ. ಈ ಚಿತ್ರ ಸೂಪರ್​ ಹಿಟ್​ ಆಗುತ್ತಿದ್ದಂತೆಯೇ, ಅವರಿಬ್ಬರೂ ಮತ್ತೊಮ್ಮೆ ಜತೆಯಾಗಿ ಕೆಲಸ ಮಾಡುವ ಪ್ರಯತ್ನಗಳಾದವು. ಆದರೆ, ಅದ್ಯಾಕೋ ಕೈಗೂಡಿಬರಲೇ ಇಲ್ಲ.

    ಇದನ್ನೂ ಓದಿ: ಇದು ನಮಿತಾ ಥಿಯೇಟರ್: ನೈಜ ಘಟನೆ ಆಧರಿತ ಕಥೆಗಳು ಇದರ ವಿಶೇಷತೆ

    ಮೂಲಗಳ ಪ್ರಕಾರ ಬಾಜಿರಾವ್​ ಮಸ್ತಾನಿ ಮತ್ತು ಪದ್ಮಾವತ್​ ಚಿತ್ರಗಳಲ್ಲಿ ನಟಿಸುವುದಕ್ಕೆ ಮೊದಲಿಗೆ ಶಾರೂಖ್​ಗೆ ಆಫರ್​ ಕೊಟ್ಟಿದ್ದರಂತೆ ಬನ್ಸಾಲಿ. ಇದಲ್ಲದೆ ಹಮ್​ ದಿಲ್​ ದೇ ಚುಕೇ ಸನಮ್​ 2 ಮತ್ತು ಸಾಹಿರ್​ ಲುಧಿಯಾನ್ವಿ ಬಯೋಪಿಕ್​ನಲ್ಲೂ ನಟಿಸುವುದಕ್ಕೆ ಆಫರ್​ ಕೊಟ್ಟಿದ್ದರಂತೆ. ಆದರೆ, ಕಾರಣಾಂತರಗಳಿಂದ ವರ್ಕೌಟ್​ ಆಗಲಿಲ್ಲ ಮತ್ತು ಅವರಿಬ್ಬರೂ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುವುದಕ್ಕೆ ಅವಕಾಶವೇ ಸಿಗಲಿಲ್ಲ.

    ಇದೀಗ ಇಜ್ಹಾರ್​ ಎಂಬ ಹೊಸ ಚಿತ್ರದಲ್ಲಿ ಶಾರೂಖ್​ ಖಾನ್​ ಅವರನ್ನು ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಕಥೆಯನ್ನು ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಬರೆದಿಟ್ಟುಕೊಂಡಿದ್ದರಂತೆ ಬನ್ಸಾಲಿ. ಇದೊಂದು ನೈಜ ಘಟನೆಯಾಗಿದ್ದು, ಭಾರತೀಯನೊಬ್ಬ ತಾನು ಪ್ರೀತಿಸುವ ಹುಡುಗಿಯನ್ನು ಹುಡುಕಿಕೊಂಡು ನಾರ್ವೆವರೆಗೂ ಸೈಕಲ್​ನಲ್ಲಿ ಪ್ರಯಾಣ ಮಾಡುವ ಕಥಾನಕ ಈ ಚಿತ್ರದಲ್ಲಿದೆಯಂತೆ.

    ಇದನ್ನೂ ಓದಿ: ಜೀ ಕನ್ನಡದಲ್ಲಿ ಅನ್​ಲಿಮಿಟೆಡ್ ಮನರಂಜನೆ

    ಈ ಘಟನೆಯನ್ನಿಟ್ಟುಕೊಂಡು ಬನ್ಸಾಲಿ ಚಿತ್ರಕಥೆ ಬರೆದಿದ್ದು, ಶಾರೂಖ್​ ಖಾನ್​ಗೆ ನರೇಶನ್​ ಕೊಟ್ಟಿದ್ದಾರಂತೆ. ಆದರೆ, ಸದ್ಯ ಪಠಾಣ್​ ಚಿತ್ರದಲ್ಲಿ ನಟಿಸುತ್ತಿರುವ ಶಾರೂಖ್​, ಆ ನಂತರ ರಾಜಕುಮಾರ್​ ಹಿರಾನಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಒಪ್ಪಿರುವ ಚಿತ್ರಗಳು ಮುಗಿಯುವುದಕ್ಕೆ ಇನ್ನೊಂದು ವರ್ಷವಾದರೂ ಬೇಕು. ಆ ನಂತರ ಬನ್ಸಾಲಿಗೆ ಶಾರೂಖ್​ ಕಾಲ್​ಶೀಟ್​ ಕೊಡುತ್ತಾರಾ? ಈ ಪ್ರಶ್ನೆಗೆ ಉತ್ತರ ಸಿಗುವುದಕ್ಕೆ ಇನ್ನೆಷ್ಟು ಸಮಯ ಬೇಕೋ ಗೊತ್ತಿಲ್ಲ?

    ಕಂಗನಾಗೆ ಪಾಸಿಟಿವ್ … ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ ನಟಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts