ನವದೆಹಲಿ: ಶಾಹೀನ್ ಬಾಘ್ನಲ್ಲಿ ಪ್ರತಿಭಟನಾಕಾರರ ಮೇಲೆ ಫೈರಿಂಗ್ ಮಾಡಿದ್ದ ಕಪಿಲ್ ಗುಜರ್ 2019ರ ಆರಂಭದಲ್ಲೇ ಆಮ್ ಆದ್ಮಿ ಪಕ್ಷವನ್ನು ಸೇರಿರುವುದಾಗಿ ದೆಹಲಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ವಿಚಾರಣೆ ವೇಳೆ ಕಪಿಲ್ ಗುಜರ್ನಿಂದ ಆಪ್ನ ಅನೇಕ ಹಿರಿಯ ನಾಯಕರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ, ಕಪಿಲ್ ಗುಜರ್ನೊಂದಿಗಿನ ಸಂಬಂಧವನ್ನು ಆಪ್ ತಿರಸ್ಕರಿಸಿದೆ.
ಕಳೆದ ಶನಿವಾರ ಶಾಹೀನ್ ಬಾಘನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನಾ ವೇಳೆ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದ. ಅಲ್ಲದೆ, ನೂರಾರು ಮಹಿಳೆಯರು ಮತ್ತ ಮಕ್ಕಳು ಕುಳಿತಿದ್ದ ಕಡೆಗೆ ಕಲ್ಲು ತೂರಾಟ ನಡೆಸಲಾಗಿತ್ತು. ನಮ್ಮ ದೇಶದಲ್ಲಿ ಹಿಂದುಗಳು ಮಾತ್ರ ಮೇಲುಗೈ ಸಾಧಿಸಬೇಕೆಂದು ಘೋಷಣೆ ಕೂಗುತ್ತಿದ್ದ. ಆತನನ್ನು ಬಂಧಿಸಿದಾಗ ತಾನು ಕಪಿಲ್ ಗುಜರ್ ಎಂದು ಹೇಳಿಕೊಂಡಿದ್ದ. (ಏಜೆನ್ಸೀಸ್)