More

    ಅಂಬಾನಿ ಪಾರ್ಟಿಯಲ್ಲಿ ರಾಮ್ ಚರಣ್​​​ಗೆ ‘ಇಡ್ಲಿ ವಡಾ’ ಎಂದ ಶಾರುಖ್; ಗರಂ ಆದ ನೆಟ್ಟಿಗರು, ವರ್ಣಭೇದ ನೀತಿ ಚರ್ಚೆ ಆರಂಭ

    ಗುಜರಾತ್: ಇತ್ತೀಚೆಗಷ್ಟೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭ ಗುಜರಾತ್ ನ ಜಾಮ್ ನಗರದಲ್ಲಿ ನಡೆಯಿತು. ಪ್ರಸ್ತುತ ಇಡೀ ಇಂಟರ್ನೆಟ್ ಈ ಜೋಡಿಯ ಸಮಾರಂಭದಲ್ಲಿ ಭಾಗವಹಿಸಿದ ತಾರೆಯರ ಫೋಟೋಗಳಿಂದ ತುಂಬಿ ಹೋಗಿದೆ. ಭಾರತ ಮತ್ತು ವಿದೇಶಗಳ ಅತಿಥಿಗಳು ಮತ್ತು ಬಾಲಿವುಡ್‌ನಿಂದ ಹಾಗೂ ದಕ್ಷಿಣ ಇಂಡಸ್ಟ್ರಿಯ ಅನೇಕ ದೊಡ್ಡ ತಾರೆಯರು ಈ ಅದ್ಧೂರಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಮೂರು ದಿನಗಳ ಆಚರಣೆಯ ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ನೀವು ಆನ್‌ಲೈನ್‌ನಲ್ಲಿ ಸಹ ವೀಕ್ಷಿಸಬಹುದು.

    ಏತನ್ಮಧ್ಯೆ, ಸಮಾರಂಭದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ ಬಾಲಿವುಡ್‌ನ ಕಿಂಗ್ ಶಾರುಖ್ ಖಾನ್ ದಕ್ಷಿಣದ ಸೂಪರ್‌ಸ್ಟಾರ್ ರಾಮ್ ಚರಣ್​​​ಗೆ ತಮಾಷೆಯಾಗಿ ಏನನ್ನೋ ಹೇಳುತ್ತಿರುವುದು ಕಂಡುಬಂದಿದೆ. ಆದರೆ ಇದನ್ನು ನೆಟ್ಟಿಗರು ಇಷ್ಟಪಡಲಿಲ್ಲ.

    ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ, ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದರು. ಈ ಸಮಯದಲ್ಲಿ, ಎಲ್ಲಾ ಮೂವರು ಖಾನ್‌ಗಳು ಆಸ್ಕರ್ ವಿಜೇತ ‘RRR’ ನ ‘ನಾಟು ನಾಟು’ ಹಾಡಿನಲ್ಲಿ ಅದ್ಭುತವಾದ ನೃತ್ಯವನ್ನು ಮಾಡಿದರು. ಆದರೆ, ಮೂವರು ಖಾನ್‌ಗಳು ‘ನಾಟು ನಾಟು’ ಚಿತ್ರದ ಸಾಂಪ್ರದಾಯಿಕ ಹುಕ್ ಹೆಜ್ಜೆಯನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ, ಶಾರುಖ್ ಚಿತ್ರದ ನಾಯಕ ನಟ ರಾಮ್ ಚರಣ್ ಅವರನ್ನು ವೇದಿಕೆಗೆ ಕರೆದರು.

    ಈ ವೇಳೆ ಶಾರುಖ್ ರಾಮ್ ಚರಣ್ ಗೆ ‘ಎಲ್ಲಿ ಇಡ್ಲಿ-ವಡಾ…’ ಎಂದು ತಮಾಷೆಯಾಗಿ ಕರೆದಿದ್ದಾರೆ. ಎಲ್ಲಾ ನಾಲ್ವರು ನಟರು ಒಟ್ಟಾಗಿ ವೇದಿಕೆಯಲ್ಲಿ ಈ ಹಾಡಿಗೆ ಉತ್ತಮ ಪ್ರದರ್ಶನ ನೀಡಿದರು. ಆದರೆ ಶಾರುಖ್ ಅವರ ಈ ಜೋಕ್ ಈಗ ವಿವಾದಾಸ್ಪದವಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ…

    ಕೋಪಗೊಂಡ ರಾಮ್ ಚರಣ್ ಮೇಕಪ್ ಆರ್ಟಿಸ್ಟ್ 
    ಖಾನ್ ಅವರ ಈ ಹೇಳಿಕೆಯ ನಂತರ ಅಭಿಮಾನಿಗಳು ಮಾತ್ರವಲ್ಲದೆ ರಾಮ್ ಚರಣ್ ಅವರ ಮೇಕಪ್ ಆರ್ಟಿಸ್ಟ್ ಕೂಡ ಬಹಳ ಕೋಪಗೊಂಡಿದ್ದಾರೆ. ಶಾರುಖ್ ಮಾತಿಗೆ ಆರ್ಟಿಸ್ಟ್ ಝೆಬಾ ಹಸಿನ್ ಕೋಪಗೊಂಡು ಅಂಬಾನಿ ಪಾರ್ಟಿ ಬಿಟ್ಟು ಹೊರ ಹೋಗಿದ್ದಾರೆ. ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಲಾಗಿದೆ. “ಇಡ್ಲಿ ವಡಾ ರಾಮ್ ಚರಣ್ ಎಲ್ಲಿದ್ದೀರಾ? ಎಂದ ನಂತರ ನಾನು ಅಲ್ಲಿಂದ ಹೊರಟೆ. ರಾಮ್ ಚರಣ್‌ನಂತಹ ಸ್ಟಾರ್‌ಗೆ ಇಂತಹ ಅವಮಾನ” ಎಂದು ಬರೆದುಕೊಂಡಿದ್ದಾರೆ.

    ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ತಾನೂ ಕೂಡ ಶಾರುಖ್ ಅವರ ದೊಡ್ಡ ಅಭಿಮಾನಿ ಆದರೆ ರಾಮ್ ಚರಣ್ ಅವರನ್ನು ವೇದಿಕೆಗೆ ಕರೆದ ಅವರ ವರ್ತನೆ ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದರು.

    ಕಿಂಗ್ ಖಾನ್ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆ
    ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಅಭಿಮಾನಿಗಳು ಕೂಡ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸೌತ್ ಸ್ಟಾರ್ ರಾಮ್ ಚರಣ್ ಅಭಿಮಾನಿಗಳು ಕೂಡ ಕಿಂಗ್ ಖಾನ್ ಮೇಲೆ ಕೋಪಗೊಂಡಿದ್ದಾರೆ. ಶಾರುಖ್ ಅವರನ್ನು ಟೀಕಿಸಿದ ಬಳಕೆದಾರರು “ಇದು ಒಳ್ಳೆಯದಲ್ಲ ಸಹೋದರ. ದಕ್ಷಿಣ ಭಾರತೀಯರನ್ನು ‘ಕಪ್ಪು’ ಎಂದು ಕರೆಯುವುದು ಮತ್ತು ಅವರನ್ನು ‘ಇಡ್ಲಿ ವಡಾ ಸಾಂಬಾರ್’ ಎಂದು ಕರೆಯುವುದು ಅವಮಾನಕರವಾಗಿದೆ. ನಾವು ಉತ್ತರ ಭಾರತೀಯರು ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಈ ಸ್ಟೀರಿಯೊಟೈಪ್‌ಗಳನ್ನು ಎದುರಿಸಿ.”, “ಇಡ್ಲಿ ಸಾಂಬಾರ್” ವಿಡಂಬನೆ ಯಾವಾಗಲೂ ನಕಾರಾತ್ಮಕ ಅರ್ಥವನ್ನು ಹೊಂದಿರುತ್ತದೆ. ಶಾರುಖ್ ಯಾವಾಗಲೂ ಬಾಲಿಶ ಮತ್ತು ಸಂವೇದನಾರಹಿತ”, “ಶಾರುಖ್ ಖಾನ್ ದಕ್ಷಿಣದ ರಾಮ್ ಚರಣ್ ಅವರನ್ನು ಇಡ್ಲಿ ಎಂದು ಕರೆಯುವ ಮೂಲಕ ಜನಾಂಗೀಯ ನಿಂದನೆ ಮಾಡುತ್ತಿದ್ದಾರೆ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.   

    ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ ಪಾಕ್​​ ಆಟಗಾರ್ತಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts