More

    23, 24ರಂದು ದಾವಣಗೆರೆಯಲ್ಲಿ ಅಧಿವೇಶನ

    ನುಗ್ಗೇಹಳ್ಳಿ: ದಾವಣಗೆರೆಯಲ್ಲಿ ಡಿ.23, 24ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಎರಡೂ ದಿನಗಳು ನಡೆಯುವ ಅಧಿವೇಶನಕ್ಕೆ ತಾಲೂಕಿನ ಸಮಾಜದವರು ಪಾಲ್ಗೊಳ್ಳಬೇಕು ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಎನ್.ಪರಮೇಶ್ ಮನವಿ ಮಾಡಿದರು.

    ಅರಳೆಪೇಟೆ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು. ಅಧಿವೇಶನಕ್ಕೆ ಬರುವ ಸದಸ್ಯರಿಗೆ ವಾಹನ, ಊಟ, ವಸತಿ ಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದರು.

    ಸಭೆಯಲ್ಲಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎ.ಆರ್.ನಾಗರಾಜ್, ಕೋಶಾಧ್ಯಕ್ಷ ರುದ್ರಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ನಂದೀಶ್, ಖಜಾಂಚಿ ಸುರೇಶ್, ಲಾಯರ್ ದರ್ಶನ್, ಬಿ.ಸಿ.ಚನ್ನೇಗೌಡ, ನಿರ್ದೇಶಕರಾದ ದೇವೇಂದ್ರಪ್ಪ, ಸತೀಶ್, ಮಂಜುನಾಥ್, ಭಾರತಿ, ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ರೇಖಾ ಗಿರೀಶ್, ಯುವ ಘಟಕದ ಉಪಾಧ್ಯಕ್ಷ ಮರಿಶೆಟ್ಟಿಹಳ್ಳಿ ಸತೀಶ್, ಕಾರ್ಯದರ್ಶಿ ಆಕಾಶ್, ಖಜಾಂಚಿ ಚಿರಂಜೀವಿ, ಶಿವಾನಂದ್, ಮಹಿಳಾ ಘಟಕದ ಕಾರ್ಯದರ್ಶಿ ಯಶಸ್ವಿನಿ, ಉಪಾಧ್ಯಕ್ಷೆ ರೂಪವತಿ, ಶುಭಾ ವಿದ್ಯಾರಾಣಿ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts