ನೇಸರಗಿ: ಹಣಬರಹಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಸ್ಥಳಕ್ಕೆ ಈಚೆಗೆ ಭೇಟಿ ನೀಡಿದ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಪರಿಶೀಲಿಸಿದರು.
ಜಲಾಮೃತ ಯೋಜನೆಯಡಿ ಕೈಗೊಂಡ ಕೆಲಸ ಪರಿಶೀಲಿಸಿ, ಕಾರ್ಮಿಕರ ಜಾಬ್ ಕಾರ್ಡ್ ಪ್ರಕಾರ ಎಲ್ಲರೂ ಹಾಜರಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. ಕಾರ್ಮಿಕರಿಂದ ಕೆಲಸದ ಬಗ್ಗೆ ಮಾಹಿತಿ ಪಡೆದರು.
ಕೆಲಸ ಮಾಡುತ್ತಿರುವ ಪ್ರದೇಶದಲ್ಲಿ ನೆಲ ತುಂಬ ಗಟ್ಟಿಯಾಗಿದೆ. ಹೆಚ್ಚಿನ ಹಣ ಸಂದಾಯ ಮಾಡಿ ಎಂದು ಕಾರ್ಮಿಕರು ಹೇಳಿದಾಗ ಸರ್ಕಾರದ ನಿಯಮದಂತೆ ನೀಡಲಾಗುತ್ತದೆ ಎಂದರು. ಸ್ವತಃ ತಾವೇ ಪಿಕಾಸಿ ಹಿಡಿದು ನೆಲ ಅಗೆದು ತೋರಿಸಿದರು. ಅರಣ್ಯ ಇಲಾಖೆಯಿಂದ ನೆಡಲಾದ ಗಿಡಗಳನ್ನೂ ವೀಕ್ಷಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೋಕಾಶಿ, ಉಪನಿರ್ದೇಶಕ ಎಚ್.ಡಿ. ಕೋಳೆಕರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ಮುಲ್ಲಾ, ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಜಿಪಂ ಸದಸ್ಯ ನಿಂಗಪ್ಪ ಅರಕೇರಿ, ಕೃಷಿ ಅಧಿಕಾರಿಗಳಾದ ಆರ್.ಐ. ಕುಂಬಾರ, ಎಸ್.ಎನ್. ಹೊಸೂರ, ಅರಣ್ಯ ಇಲಾಖೆ ಅಧಿಕಾರಿಗಳು, ಪಿಡಿಒ ಶಿವಾನಂದ ಕಲ್ಲೂರ, ಗ್ರಾಪಂ ಸಿಬ್ಬಂದಿ ಇದ್ದರು.