More

    ಪಿಪಿಸಿ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ ಶ್ರೀರಮಣ ಐತಾಳ್​

    ಉಡುಪಿ : ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ನಿವೃತ್ತ ಸ್ಥಾಪಕ ಕುಲಪತಿ ಡಾ. ಪಿ. ಶ್ರೀರಮಣ ಐತಾಳ್​ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗದ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.

    22ವರ್ಷಗಳ ಆಡಳಿತಾತ್ಮಕ, 33 ವರ್ಷಗಳ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ವೃತ್ತೀಜಿವನದ ಅನುಭವ ಹೊಂದಿದವರು ಐತಾಳ್​ ಇವರಿಗೆ ಪೂರ್ಣಪ್ರಜ್ಞ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೊಸ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ತಂತ್ರಜ್ಞಾನ ನಿರ್ವಹಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಆವಿಷ್ಕಾರ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿದ್ದು, ಅಮೆರಿಕಾದ ಎಸ್​ಎಸ್​ಆರ್​ಎನ್​ ರೀಸರ್ಚ್​ ನೆಟ್ವರ್ಕಿನ ಮೂವತ್ತು ಸಾವಿರ ಲೇಖಕರಲ್ಲಿ ಇವರು ಎರಡನೇ ಶ್ರೇಣಿಯನ್ನು ಪಡೆದಿದ್ದಾರೆ. ಪ್ರಸ್ತುತ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ನವದೆಹಲಿಯ ಎಐಯು ಹಾಗೂ ನ್ಯಾಕ್​ ಪರಿಶೀಲನಾ ತಂಡಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 12 ಸೂಪರ್​ ಇನ್ನೋವೇಷನ್ಸ್​, ಒಂದು ಸಾವಿರ ಸಂಶೋಧನಾತ್ಮಕ ಲೇಖನಗಳು, 50ಕ್ಕೂ ಅಧಿಕ ಮೌಲಿಕ ಕೃತಿಗಳನ್ನು ಸಂಪಾದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts