ಉಡುಪಿ : ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ನಿವೃತ್ತ ಸ್ಥಾಪಕ ಕುಲಪತಿ ಡಾ. ಪಿ. ಶ್ರೀರಮಣ ಐತಾಳ್ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಸ್ತರಣೆ ವಿಭಾಗದ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.
22ವರ್ಷಗಳ ಆಡಳಿತಾತ್ಮಕ, 33 ವರ್ಷಗಳ ಶೈಕ್ಷಣಿಕ ಹಾಗೂ ಸಂಶೋಧನಾತ್ಮಕ ವೃತ್ತೀಜಿವನದ ಅನುಭವ ಹೊಂದಿದವರು ಐತಾಳ್ ಇವರಿಗೆ ಪೂರ್ಣಪ್ರಜ್ಞ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೊಸ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ತಂತ್ರಜ್ಞಾನ ನಿರ್ವಹಣೆ ಹಾಗೂ ಉನ್ನತ ಶಿಕ್ಷಣದಲ್ಲಿ ಆವಿಷ್ಕಾರ ವಿಷಯದಲ್ಲಿ ವಿಶೇಷ ಪರಿಣತಿ ಹೊಂದಿದ್ದು, ಅಮೆರಿಕಾದ ಎಸ್ಎಸ್ಆರ್ಎನ್ ರೀಸರ್ಚ್ ನೆಟ್ವರ್ಕಿನ ಮೂವತ್ತು ಸಾವಿರ ಲೇಖಕರಲ್ಲಿ ಇವರು ಎರಡನೇ ಶ್ರೇಣಿಯನ್ನು ಪಡೆದಿದ್ದಾರೆ. ಪ್ರಸ್ತುತ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿದ್ದು, ನವದೆಹಲಿಯ ಎಐಯು ಹಾಗೂ ನ್ಯಾಕ್ ಪರಿಶೀಲನಾ ತಂಡಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 12 ಸೂಪರ್ ಇನ್ನೋವೇಷನ್ಸ್, ಒಂದು ಸಾವಿರ ಸಂಶೋಧನಾತ್ಮಕ ಲೇಖನಗಳು, 50ಕ್ಕೂ ಅಧಿಕ ಮೌಲಿಕ ಕೃತಿಗಳನ್ನು ಸಂಪಾದಿಸಿದ್ದಾರೆ.