ಶ್ರೀನಗರ: ಕುಲ್ಗಾಂವ್ದ ಮೂವರ ವಿರುದ್ಧ ಇಂದು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಿದೆ.
ಮುನೀಬ್ ಹಮೀದ್ ಭಟ್, ಜುನೈದ್ ಅಹ್ಮದ್ ಮಟ್ಟೂ ಮತ್ತು ಉಮರ್ ರಶೀದ್ ವಾನಿ ಈ ಮೂವರೂ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಯುವಕರನ್ನು ಸೆಳೆದು, ತರಬೇತಿ ಕೊಡಿಸಲು ಸಹಾಯ ಮಾಡುತ್ತಿದ್ದರು ಎಂಬ ಆರೋಪದಡಿ ಈ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
2017ರಲ್ಲಿ ಜಮ್ಮು-ಕಾಶ್ಮೀರದ ಪೊಲೀಸರು ಇವರ ವಿರುದ್ಧ ಮೊದಲು ಪ್ರಕರಣ ದಾಖಲಿಸಿದ್ದರು. ಕಾಶ್ಮೀರ ಕಣಿವೆಯ ಯುವಕರನ್ನು ಸೆಳೆದು ಉಗ್ರ ಸಂಘಟನೆಗೆ ಸೇರಿಸುವುದಲ್ಲದೆ, ಅವರನ್ನು ತರಬೇತಿಗಾಗಿ ಪಾಕಿಸ್ತಾನಕ್ಕೆ ಕಳಿಸುವ ವ್ಯವಸ್ಥೆಯನ್ನೂ ಇವರು ಮಾಡುತ್ತಿದ್ದರು ಎಂಬ ಆರೋಪದಡಿ ಅಂದು ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಹತ್ರಾಸ್ನಲ್ಲಿ ಮಾಧ್ಯಮದವರಿಗೂ ತ್ರಾಸು.. ಪತ್ರಕರ್ತರಿಗೆ ಪ್ರವೇಶ ನಿಷೇಧ!
2018ರಲ್ಲಿ ಕೇಸ್ ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದ ಎನ್ಐಎ ಇದೀಗ ಚಾರ್ಜ್ಶೀಟ್ ಸಲ್ಲಿಸಿದೆ. ಜಮ್ಮುಕಾಶ್ಮೀರದಲ್ಲಿರುವ ಹಲವು ಪ್ರತ್ಯೇಕತಾವಾದಿಗಳೇ ಯುವಕರನ್ನು ಉಗ್ರಸಂಘಟನೆಗೆ ಸೇರಿಸಿ, ಅವರಿಗೆ ಅಧಿಕೃತ ದಾಖಲೆಗಳನ್ನು ನೀಡಿದ ಪಾಕಿಸ್ತಾನಕ್ಕೆ ಕಳಿಸುತ್ತಿದ್ದಾರೆ. ಹಾಗೇ ಉಗ್ರ ಸಂಘಟನೆಗೆ ಸೇರಲ್ಪಟ್ಟ ಯುವಕರು ಪಾಕಿಸ್ತಾನದಲ್ಲಿ 5-15ದಿನಗಳ ಕಾಲ ತರಬೇತಿ ಪಡೆದು ವಾಪಸ್ ಬರುತ್ತಾರೆ. ನಂತರ ಅಂಥವರನ್ನು ಇಲ್ಲಿ ಸ್ಲೀಪರ್ ಸೆಲ್ಗಳಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ಎನ್ಐಎ ತಿಳಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಮಹಿಳೆಯರ ಡಬಲ್ ಮರ್ಡರ್ ಹಿಂದಿದೆ ಡಬಲ್ ಪ್ರೇಮ್ ಕಹಾನಿ..!
ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದವರಲ್ಲಿ ಜುನೈದ್ ಅಹ್ಮದ್ ಮಟ್ಟೂ ಮತ್ತು ಉಮರ್ ರಶೀದ್ ವಾನಿ ಈಗಾಗಲೇ ಪ್ರತ್ಯೇಕ ಎನ್ಕೌಂಟರ್ನಲ್ಲಿ ಬಲಿಯಾಗಿದ್ದಾರೆ. ಸದ್ಯ ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ಮಟ್ಟ ಕಡಿಮೆ ಮಾಡಲು ತನಿಖಾ ದಳ, ರಕ್ಷಣಾ ಪಡೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿವೆ. (ಏಜೆನ್ಸೀಸ್)
‘ಯುಪಿ ಪೊಲೀಸರು ನಮ್ಮ ರವಿಕೆಯನ್ನು ಎಳೆದು, ಅನುಚಿತವಾಗಿ ಮುಟ್ಟಿದರು’-ಟಿಎಂಸಿ ನಾಯಕಿಯರ ಆರೋಪ