More

    ಪೃಥ್ವಿ ಷಾ ಟೀಮ್​ ಇಂಡಿಯಾಗೆ ಮರಳಬೇಕಾದರೆ ಈ ಷರತ್ತು ಪೂರೈಸಬೇಕಂತೆ!

    ನವದೆಹಲಿ: ಕಳೆದ ದೇಶೀಯ ಕ್ರಿಕೆಟ್​ ಋತುವಿನಲ್ಲಿ ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ಪ್ರವಾಹವನ್ನೇ ಹರಿಸಿದ್ದ ಮುಂಬೈ ಬ್ಯಾಟ್ಸ್​ಮನ್​ ಪೃಥ್ವಿ ಷಾ ಇತ್ತೀಚೆಗೆ ಐಪಿಎಲ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್​ ಪರ ಉತ್ತಮ ಬ್ಯಾಟಿಂಗ್​ ನಿರ್ವಹಣೆ ತೋರಿದ್ದರು. ಇದರ ಹೊರತಾಗಿಯೂ ಅವರನ್ನು ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಮತ್ತು ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೆ ಭಾರತ ತಂಡಕ್ಕೆ ಪರಿಗಣಿಸಲಾಗಿಲ್ಲ. ಇದಕ್ಕೆ ಸೂಕ್ತ ಕಾರಣವನ್ನೂ ನೀಡಿರುವ ಆಯ್ಕೆಗಾರರು, ಪೃಥ್ವಿ ಷಾ ಇನ್ನು ಟೀಮ್​ ಇಂಡಿಯಾಗೆ ಮರಳಲು ಷರತ್ತು ಒಂದನ್ನು ಕೂಡ ವಿಧಿಸಿದ್ದಾರೆ.

    ಇಂಗ್ಲೆಂಡ್​ ಪ್ರವಾಸಕ್ಕೆ ಆಯ್ಕೆ ಮಾಡಲಾದ 20 ಆಟಗಾರರ ಭಾರತ ತಂಡದಲ್ಲಿ ಹಾರ್ದಿಕ್​​ ಪಾಂಡ್ಯ, ಕುಲದೀಪ್​ ಯಾದವ್​ ಮತ್ತು ಭುವನೇಶ್ವರ್​ ಕುಮಾರ್​ ಹೆಸರು ಮಿಸ್​ ಆಗಿತ್ತು. ಇದರೊಂದಿಗೆ ಯುವ ಆರಂಭಿಕ ಪೃಥ್ವಿ ಷಾ ಅವಕಾಶ ವಂಚಿತರಾಗಿದ್ದು ಕೂಡ ಕೆಲವರ ಗಮನಸೆಳೆದಿತ್ತು. ಇದಕ್ಕೀಗ ಸೂಕ್ತ ಕಾರಣವೂ ಬಹಿರಂಗಗೊಂಡಿದೆ.

    ಇದನ್ನೂ ಓದಿ: ಇಂಗ್ಲೆಂಡ್​ನಲ್ಲಿ ಪೂರ್ಣಗೊಳ್ಳಲಿದೆ ಐಪಿಎಲ್​ 14ನೇ ಆವೃತ್ತಿ?

    21 ವರ್ಷದ ಪೃಥ್ವಿ ಷಾ ಭಾರತ ತಂಡಕ್ಕೆ ಮರಳಬೇಕಾದರೆ ಫಿಟ್ನೆಸ್​ನತ್ತ ಹೆಚ್ಚಿನ ಗಮನಹರಿಸಬೇಕೆಂದು ಆಯ್ಕೆಗಾರರು ಬಯಸಿದ್ದಾರೆ. ಹೀಗಾಗಿ ಪೃಥ್ವಿ ಷಾ ಕೆಲವು ಕೆಜಿ ತೂಕವನ್ನಾದರೂ ಕರಗಿಸಿಕೊಳ್ಳಬೇಕೆಂದು ಷರತ್ತು ವಿಧಿಸಿದ್ದಾರೆ. ಹೆಚ್ಚಿನ ದೇಹತೂಕದಿಂದಾಗಿ ಮೈದಾನದಲ್ಲಿ ಪೃಥ್ವಿ ಷಾ ಚಲನೆ ನಿಧಾನವಾಗಿದೆ. ಆಸ್ಟ್ರೆಲಿಯಾ ಪ್ರವಾಸದಲ್ಲೂ ಅವರ ಫೀಲ್ಡಿಂಗ್​ ನಿರ್ವಹಣೆ ಬಗ್ಗೆ ದೂರುಗಳು ಬಂದಿದ್ದವು. ಆಸ್ಟ್ರೆಲಿಯಾದಿಂದ ಮರಳಿದ ಬಳಿಕ ಪೃಥ್ವಿ ಷಾ ಬ್ಯಾಟಿಂಗ್​ನಲ್ಲಿನ ತಾಂತ್ರಿಕ ದೋಷದ ಬಗ್ಗೆ ಹೆಚ್ಚಿನ ಗಮನಹರಿಸಿ ಸುಧಾರಣೆ ಕಂಡಿದ್ದರೂ, ಫಿಟ್ನೆಸ್​ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆಯ್ಕೆಗಾರರು ದೂರಿದ್ದಾರೆ ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.

    ಇನ್ನು ಪೃಥ್ವಿ ಷಾಗೆ ರಿಷಭ್​ ಪಂತ್​ ಮಾದರಿಯಾಗಬೇಕು ಎಂದೂ ಆಯ್ಕೆಗಾರರು ಅಭಿಪ್ರಾಯಪಟ್ಟಿದ್ದಾರೆ. ರಿಷಭ್​ ಪಂತ್​ ಕೂಡ 2018-19ರಲ್ಲಿ ಕೆಟ್ಟ ಫಿಟ್ನೆಸ್​ ಮತ್ತು ಫಾಮ್​ರ್ನಿಂದಾಗಿ ತಂಡದಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದ್ದರು. ಆದರೆ ಕಳೆದ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದಿಂದ ಪಂತ್​ ಭಿನ್ನ ಆಟಗಾರರಾಗಿ ಕಾಣಿಸಿಕೊಂಡಿದ್ದು, ಬ್ಯಾಟಿಂಗ್​ನಲ್ಲಿ ಭರ್ಜರಿ ಲಯದಲ್ಲಿದ್ದಾರೆ. ಇದರಿಂದಾಗಿ ಅವರು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕರಾಗಿಯೂ ಬಡ್ತಿ ಲಭಿಸಿತ್ತು.

    ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ರನ್​ಬರ ಎದುರಿಸಿ ತವರಿನ ಇಂಗ್ಲೆಂಡ್​ ವಿರುದ್ಧದ ಸರಣಿಗೆ ಹೊರಬಿದ್ದಿದ್ದ ಪೃಥ್ವಿ ಷಾ ಬಳಿಕ ವಿಜಯ್​ ಹಜಾರೆ ಟ್ರೋಫಿಯ 8 ಪಂದ್ಯಗಳಲ್ಲಿ 827 ರನ್​ ಸಿಡಿಸಿದ್ದರು. ಅಲ್ಲದೆ ಟೂನಿರ್ಯ ಇತಿಹಾಸದಲ್ಲಿ 800ಕ್ಕೂ ಅಧಿಕ ರನ್​ ಸಿಡಿಸಿದ ಮೊದಲಿಗರೆನಿಸಿದ್ದರು. ಬಳಿಕ ಐಪಿಎಲ್​ನಲ್ಲೂ ಡೆಲ್ಲಿ ತಂಡಕ್ಕೆ ಕೆಲ ಪಂದ್ಯಗಳಲ್ಲಿ ಭರ್ಜರಿ ಆರಂಭ ಒದಗಿಸಿ ಗೆಲುವಿನ ರೂವಾರಿ ಎನಿಸಿದ್ದರು. ಆದರೆ ಈ ನಡುವೆ ದೇಹತೂಕ ಕರಗಿಸಿಕೊಳ್ಳಲು ವಿಲರಾಗಿರುವುದು ಅವರ ಟೀಮ್​ ಇಂಡಿಯಾ ಮರುಪ್ರವೇಶಕ್ಕೆ ಅಡ್ಡಿಯಾಗಿದೆ.

    ಕ್ರಿಕೆಟರ್ ಭುವನೇಶ್ವರ್​ ಜತೆಗಿನ ಸಂಬಂಧ ಎಂಥದ್ದು? ಆ್ಯಂಕರ್​ ಶ್ಯಾಮಲಾ ಹೇಳಿದ್ದು ಹೀಗೆ…​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts