ತಿ.ನರಸೀಪುರ: ತಾಲೂಕಿನ ಕೊಳತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎನ್.ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಳಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆವರಣದಲ್ಲಿ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಎನ್.ಕುಮಾರ್, ಕಾಳಯ್ಯ ಇಬ್ಬರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವಿ.ಸರ್ವಮಂಗಳಾ ಅವಿರೋಧ ಆಯ್ಕೆ ಘೋಷಿಸಿದರು.
ಸಂಘದ ನಿರ್ದೇಶಕರಾದ ಕೃಷ್ಣ, ಮಹದೇವ, ಶಂಕರ, ರತ್ನಮ್ಮ ಸೋಮಣ್ಣ, ಕೆ.ಎಸ್.ಮಹದೇವ, ಪದ್ಮಾ, ನಿಂಗರಾಜು, ರತ್ನಮ್ಮ, ಬಿ.ಲೋಕೇಶ್, ತಿಮ್ಮರಾಯಿ ಗೌಡ, ಮುಖಂಡರಾದ ಮರಿಸ್ವಾಮಿ, ರಾಜೇಂದ್ರ, ಕೆಂಪರಾಜು, ಮಾದಯ್ಯ, ನಂಜಯ್ಯ, ಅಪ್ಪು, ಕಿರಣ್, ಬೋಳಯ್ಯನ ನಾಗಣ್ಣ, ಅಂದಾನಿ, ನಾಗಣ್ಣ, ಕೆ.ಟಿ.ನಂಜುಂಡಸ್ವಾಮಿ, ಗ್ರಾಪಂ ಅಧ್ಯಕ್ಷ ರವಿ, ದಾಳಣ್ಣ, ಪುಟ್ಟಸ್ವಾಮಿ, ಅರುಣ, ಮಂಜು, ಸಂತೋಷ, ಅಂಗಡಿ ಸಿದ್ದರಾಜು, ಕಬಾಬ್ ಶಂಕರ, ಕೆಂಪಣ್ಣನ ಗಿರಿ, ದೊಡ್ಡೇ ಬಾಗಿಲು ಮಹದೇವಯ್ಯ, ಸಿಗೋಡಿಪುರ ಚಿಕ್ಕೂಸಣ್ಣ, ಡೇರಿ ಗುರುಮೂರ್ತಿ, ಸುಂದರ ನಾಯಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ದರಾಜು, ಹಾಲು ಪರೀಕ್ಷಕ ಎಸ್.ಧನರಾಜು, ಗುಮಾಸ್ತ ಕೆ.ಎನ್.ಗೋವಿಂದ, ಸಹಾಯಕ ಎಂ.ಚಂದನ್ ಇದ್ದರು.