ನವದೆಹಲಿ: ಅಮರನಾಥ ಯಾತ್ರೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಲಷ್ಕರ್ ಎ ತೊಯ್ಬಾದ ಉಗ್ರರು ಸಿದ್ಧತೆ ನಡೆಸಿರುವುದು ಇತ್ತೀಚೆಗಿನ ಗುಪ್ತಚರ ಮಾಹಿತಿಯಲ್ಲಿ ಬಹಿರಂಗವಾಗಿತ್ತು. ಇದೀಗ ಯಾತ್ರಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರಿಗೆ ಆರ್ಥಿಕ ನೆರವು ಒದಗಿಸಲು ಲಷ್ಕರ್ ಉಗ್ರರು ಹೊಸತೊಂದು ಮಾರ್ಗ ಆಯ್ಕೆ ಮಾಡಿಕೊಂಡಿದ್ದರು ಎಂಬ ಸಂಗತಿ ಬಯಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನಾಪಡೆಯ ಯೋಧರನ್ನು ಒಳಗೊಂಡು ಉಗ್ರರ ನಿಗ್ರಹಕ್ಕೆ ರಚಿಸಿರುವ ವಿಶೇಷ ಕಾರ್ಯಾಚರಣೆ ಪಡೆ (ಎಸ್ಒಜಿ) ಇದನ್ನು ಬಯಲು ಮಾಡಿದ್ದು, ಊಟದ ಡಬ್ಬಿಗಳಲ್ಲಿ ಬುತ್ತಿಯ ಬದಲು ಉಗ್ರರಿಗೆ ಹಣ ತಲುಪಿಸಲಾಗುತ್ತಿತ್ತು ಎಂಬುದು ಗೊತ್ತಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಜಮ್ಮು ವಲಯದ ಐಜಿಪಿ ಮುಖೇಶ್ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿ ಅದರಲ್ಲೂ ವಿಶೇಷವಾಗಿ ಜಮ್ಮುವಿನಲ್ಲಿ ಹಿಂಸಾಕೃತ್ಯ ಎಸಗಲು ಲಷ್ಕರ್ ಎ ತೊಯ್ಬಾದ ಪ್ರಮುಖ ಉಗ್ರರು ತಮ್ಮ ಜಾಲವನ್ನು ಜಾಗೃತಗೊಳಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿತ್ತು. ಇದಕ್ಕಾಗಿ ಉಗ್ರರಿಗೆ ಅಗತ್ಯವಾದ ಆರ್ಥಿಕ ನೆರವು ತಲುಪಿಸಲು ಉಗ್ರರು ವಿಶೇಷವಾದ ಉಪಾಯ ಮಾಡಿದ್ದಾರೆ ಎಂಬುದೂ ಗೊತ್ತಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಮುಸ್ಲಿಮರಿಗೆ ಮಸೀದಿಗಳಲ್ಲಿ ನಮಾಜ್ ಮಾಡಲು ಅವಕಾಶ ಕೊಟ್ಟರೆ ಕರೊನಾ ನಿಯಂತ್ರಣಕ್ಕೆ ಬರುತ್ತದೆ…’
ಈ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿರುವಾಗ ಎಸ್ಒಜಿ ಕೈಗೆ ಸಜಾನ್ ದೋಡಾದ ನಿವಾಸಿ ಮುಭಾಶಿರ್ ಬಟ್ ಎಂಬಾತ ಸಿಕ್ಕಿಬಿದ್ದಿದ್ದ. ಗಡಿಯಾಚೆಯಿಂದ ಹವಾಲಾ ಮಾರ್ಗದಲ್ಲಿ ಜಮ್ಮುವನ್ನು ತಲುಪಿದ್ದ ಹಣವನ್ನು ತಂದು ಉಗ್ರರಿಗೆ ತಲುಪಿಸುವುದು ಈತನ ಜವಾಬ್ದಾರಿಯಾಗಿತ್ತು ಎಂದು ವಿವರಿಸಿದ್ದಾರೆ.
ಈತನನ್ನು ಶೋಧಿಸಿದಾಗ ಊಟದ ಡಬ್ಬಿಗಳಲ್ಲಿ ಬಚ್ಚಿಡಲಾಗಿದ್ದ 1.5 ಲಕ್ಷ ರೂಪಾಯಿ ನಗದು ಪತ್ತೆಯಾಯಿತು ಎಂದು ಹೇಳಿದ್ದಾರೆ. ಪಾಕಿಸ್ತಾನದಲ್ಲಿರುವ ಹರೂನ್ ಎಂಬ ಲಷ್ಕರ್ನ ಪ್ರಮುಖ ಉಗ್ರನೊಬ್ಬ ದೂಡಾದಲ್ಲಿರುವ ಭೂಗತರಾಗಿ ಕೆಲಸ ಮಾಡುವ ಉಗ್ರರ ಮೂಲಕ ಈ ಹಣವನ್ನು ಕಳುಹಿಸಿದ್ದಾಗಿ ತಿಳಿಸಿದ ಎಂದು ಹೇಳಿದ್ದಾರೆ.
ದೇಶದಲ್ಲಿ ಒಂದೇ ದಿನ 40 ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು; ಮೂರೇ ದಿನದಲ್ಲಿ ಲಕ್ಷ ದಾಟಿತು