ನವದೆಹಲಿ: ರಾಮಾಯಣಕ್ಕೆ ಸಾಕ್ಷಿಯಾದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಸಲುವಾಗಿ ಇಂಡಿಯನ್ ರೈಲ್ವೇ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೋರೇಷನ್ (ಐಆರ್ಸಿಟಿಸಿ) ರಾಮಾಯಣ ಯಾತ್ರೆ ಎಂಬ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿದ್ದು, ಇದೀಗ ರಾಮಾಯಣ ಯಾತ್ರೆಯ ಎರಡನೇ ರೈಲನ್ನು ರದ್ದುಗೊಳಿಸಲಾಗಿದೆ.
18 ದಿನಗಳ ಈ ರಾಮಾಯಣ ಯಾತ್ರೆಯನ್ನು ಐಆರ್ಸಿಟಿಸಿ ಜೂ. 21ರಂದು ಆರಂಭಿಸಿತ್ತು. ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಎಂಬ ವಿಶೇಷ ರೈಲಿನ ಮೂಲಕ ರಾಮಾಯಣದ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವ ಈ ರೈಲು, 11 ಎಸಿ ಕೋಚ್ಗಳಿಂದ ಕೂಡಿದ್ದು, 600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಪ್ರತಿ ಪ್ರಯಾಣಿಕರಿಗೆ 62 ಸಾವಿರ ರೂ. ಟಿಕೆಟ್ ಖರ್ಚು ತಗುಲುತ್ತದೆ.
ವನವಾಸ ಸಂದರ್ಭದಲ್ಲಿ ರಾಮ, ಸೀತೆ, ಲಕ್ಷ್ಮಣ ಸಂಚರಿಸಿದ್ದ ಸ್ಥಳಗಳನ್ನು ಹದಿನೆಂಟು ದಿನಗಳಲ್ಲಿ ತೋರಿಸುವ ಈ ಪ್ರಯಾಣದಲ್ಲಿ ಅಯೋಧ್ಯೆ, ಜನಕಪುರ (ನೇಪಾಳ), ಬುಕ್ಸರ್, ವಾರಾಣಸಿ, ಪ್ರಯಾಗರಾಜ್, ಶ್ರಿಂಗ್ವೇರ್ಪುರ್, ಚಿತ್ರಕೂಟ, ನಾಶಿಕ್, ಹಂಪಿ, ರಾಮೇಶ್ವರ, ಕಾಂಚೀಪುರಂ, ಭದ್ರಾಚಲಂ ಮುಂತಾದ ಕ್ಷೇತ್ರಗಳ ದರ್ಶನ ಮಾಡಿಸಲಾಗುತ್ತದೆ.
ಅಂದಹಾಗೆ ಇದರ ಎರಡನೇ ರಾಮಾಯಣ ಯಾತ್ರೆಯನ್ನು ಆ. 24ರಂದು ನಡೆಯಲಿದೆ ಎಂದಿದ್ದ ಐಆರ್ಸಿಟಿಸಿ, ಇದೀಗ ಅದನ್ನು ರದ್ದುಗೊಳಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಪ್ರಯಾಣಿಕರ ಕೊರತೆ ಕಾರಣಕ್ಕೆ ರಾಮಾಯಣ ಯಾತ್ರೆಯ ಎರಡನೇ ರೈಲನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹನ್ನೊಂದು ಊರಲ್ಲಿ 3 ದಿನಗಳಿಂದ ವಿದ್ಯುತ್ ಇಲ್ಲ!; ಕತ್ತಲಲ್ಲೇ ಕಾಲ ಕಳೆಯುತ್ತಿರುವ ಗ್ರಾಮಸ್ಥರು..