More

    ಶಾಲೆಯ ಕೊಠಡಿಯಲ್ಲಿ ಶಿಕ್ಷಕನ ವಿವಾಹ ವಾರ್ಷಿಕೋತ್ಸವ!

    ಕೊಪ್ಪಳ: ರಾಜ್ಯಾದ್ಯಂತ ಶಾಲೆಗಳ ಪುನರಾರಂಭದೊಂದಿಗೆ ಮಕ್ಕಳಿಗೆ ಮತ್ತೆ ಮುಕ್ತ ಕಲಿಕೆಯ ಭಾಗ್ಯ ಲಭಿಸುವುದೆಂಬ ಸಂಭ್ರಮ ಹರಡಿದೆ. ಈ ಸಂದರ್ಭದಲ್ಲೇ ಶಾಲಾ ಮುಖ್ಯ ಶಿಕ್ಷಕರೊಬ್ಬರು ಶಾಲೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವ ಪ್ರಸಂಗ ವರದಿಯಾಗಿದೆ.

    ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಕಸ್ತೂರ ಬಾ ಶಾಲೆಯ ಮುಖ್ಯ ಶಿಕ್ಷಕ ಟಿ.ಶ್ರೀಧರ್, ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಶಾಲೆಯ ಕೊಠಡಿಯೊಂದರಲ್ಲಿ ಆಚರಿಸಿಕೊಂಡಿದ್ದಾರೆ. ಬಂಧುಬಳಗದೊಂದಿಗೆ ದಂಪತಿಯು ಕೇಕ್​ ಕಟ್​ ಮಾಡಿ ಸಂಭ್ರಮ ಪಡುತ್ತಿರುವ ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

    ಇದನ್ನೂ ಓದಿ: ಶಾಲೆ ಬಾಗಿಲಲ್ಲಿ ಕಾರ್ಟೂನ್​ ವೇಷಧರಿಸಿ ಮಕ್ಕಳನ್ನು ಸ್ವಾಗತಿಸಿದ ಶಿಕ್ಷಕರು

    ಶಾಲಾ ಆವರಣದಲ್ಲಿ ವೈಯಕ್ತಿಕ ಕಾರ್ಯಕ್ರಮಗಳನ್ನು ನಡೆಸಬಾರದು ಅನ್ನುವ ನಿಯಮವಿದೆ. ಆದರೂ ಕಸ್ತೂರ ಬಾ ಶಾಲೆಯ ಪ್ರಭಾರ ಮುಖ್ಯಸ್ಥರಾಗಿರುವ ಶ್ರೀಧರ್, ಶಾಲೆಯಲ್ಲಿ ಸಮಾರಂಭ ಮಾಡಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಅಸಮಾಧಾನ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್)

    ಕರೊನಾ ಸೋಂಕಿನಲ್ಲಿ ಮತ್ತಷ್ಟು ಇಳಿಕೆ ತೋರಿದ ಭಾರತ

    ಭಾರತದ ಕೋರ್ಟ್​ಗಳು ಶಿಥಿಲ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿವೆ: ಸಿಜೆಐ ಅಸಮಾಧಾನ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts