More

    ಅವನ ಉದ್ದೇಶ ಏನು ಎಂದು ಗೊತ್ತಿಲ್ಲ, ಟಿವಿ ನೋಡಿದ ಮೇಲೆ ತಿಳಿದಿದ್ದು: ಶಹೀನಾ​ ಬಾಗ್​ನಲ್ಲಿ ಗುಂಡಿನ ದಾಳಿ ನಡೆಸಿದ ಆರೋಪಿ ತಂದೆ ಹೇಳಿಕೆ

    ನವದೆಹಲಿ: ಅವನ ಉದ್ದೇಶ ಏನು ಎಂಬುದು ನಮಗೆ ಗೊತ್ತಿಲ್ಲ. ನಾನು ಅವನನ್ನು ಅಲ್ಲಿ ಇಳಿಸಿ ಬಂದೆ. ಆಮೇಲೆ ನಾವು ನೋಡಿದ್ದು ಟಿವಿಯಲ್ಲಿ ಎಂದು ಶಹೀನಾ​ ಬಾಗ್​ನಲ್ಲಿ ಗುಂಡಿನ ದಾಳಿ ಮಾಡಿದ ಆರೋಪಿ ತಂದೆ ಗಜೆ ಸಿಂಗ್​ ಹೇಳಿದ್ದಾರೆ.

    ನಾನು ಅವನನ್ನು ಭೇಟಿ ಮಾಡಲು ಹೋಗಿಲ್ಲ. ಬೆಳಗ್ಗೆಯಿಂದ ಮನೆಯಲ್ಲಿಯೇ ಇದ್ದೇನೆ. ಪೊಲೀಸರು ಬಂಧಿಸಿದ ನಂತರ ಅವನ ಬಗ್ಗೆ ತಿಳಿದಿಲ್ಲ. ಆದರೆ ಅವನ ಉದ್ದೇಶ ಏನು ಎಂಬುದು ಗೊತ್ತಿಲ್ಲ ಎಂದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ಕಪಿಲ್​ ಗುಜ್ಜಾರ್​ನ ತಂದೆ, ಈ ಮೊದಲು ಅವನು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಸ್ಥಳಿಯವಾಗಿಯೂ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದರು.

    ಮಧ್ಯಾಹ್ನ 12ಕ್ಕೆ ಮನೆಯಲ್ಲಿಯೇ ಇದ್ದ. ಆದರೆ ಸಂಜೆ 4ಕ್ಕೆ ಶಹೀನಾ​ ಬಾಗ್ ಹೇಗೆ ತಲುಪಿದ ತಿಳಿಯದು. ಅವನು ಅದರಲ್ಲಿ ಭಾಗಿಯಾಗಿದ್ದು ನಮಗೆ ಟಿವಿ ನೋಡಿದ ನಂತರವೇ ತಿಳಿದಿದ್ದು ಎಂದು ಕಪಿಲ್​ ಚಿಕ್ಕಪ್ಪ ಫತೇ ಸಿಂಗ್​ ಹೇಳಿದರು.

    ಬಂಧಿತ ಕಪಿಲ್​ ದೆಹಲಿ ನೋಯ್ಡಾ ಬಳಿಯ ದಲ್ಲುಪುರದ ನಿವಾಸಿ. ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಪಿಲ್​ನ ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಭಟನೆಯಿಂದಾಗಿ ಟ್ರಾಫಿಕ್​ ಜಾಮ್​ ಆಗಿತ್ತು. ಸಂಬಂಧಿಕರ ಮದುವೆಗೆಂದು ತೆರಳುತ್ತಿದ್ದ ಕಪಿಲ್​ ಜಾಮ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದ ಬೇಸರಗೊಂಡು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿಸಿದ್ದಾನೆ ಎಂದು ಡಿಸಿಪಿ ಚಿನ್ಮೊಯ್​ ಬಿಸ್ವಾಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts