ನವದೆಹಲಿ: ಅವನ ಉದ್ದೇಶ ಏನು ಎಂಬುದು ನಮಗೆ ಗೊತ್ತಿಲ್ಲ. ನಾನು ಅವನನ್ನು ಅಲ್ಲಿ ಇಳಿಸಿ ಬಂದೆ. ಆಮೇಲೆ ನಾವು ನೋಡಿದ್ದು ಟಿವಿಯಲ್ಲಿ ಎಂದು ಶಹೀನಾ ಬಾಗ್ನಲ್ಲಿ ಗುಂಡಿನ ದಾಳಿ ಮಾಡಿದ ಆರೋಪಿ ತಂದೆ ಗಜೆ ಸಿಂಗ್ ಹೇಳಿದ್ದಾರೆ.
ನಾನು ಅವನನ್ನು ಭೇಟಿ ಮಾಡಲು ಹೋಗಿಲ್ಲ. ಬೆಳಗ್ಗೆಯಿಂದ ಮನೆಯಲ್ಲಿಯೇ ಇದ್ದೇನೆ. ಪೊಲೀಸರು ಬಂಧಿಸಿದ ನಂತರ ಅವನ ಬಗ್ಗೆ ತಿಳಿದಿಲ್ಲ. ಆದರೆ ಅವನ ಉದ್ದೇಶ ಏನು ಎಂಬುದು ಗೊತ್ತಿಲ್ಲ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಪಿ ಕಪಿಲ್ ಗುಜ್ಜಾರ್ನ ತಂದೆ, ಈ ಮೊದಲು ಅವನು ಇಂತಹ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಸ್ಥಳಿಯವಾಗಿಯೂ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದರು.
ಮಧ್ಯಾಹ್ನ 12ಕ್ಕೆ ಮನೆಯಲ್ಲಿಯೇ ಇದ್ದ. ಆದರೆ ಸಂಜೆ 4ಕ್ಕೆ ಶಹೀನಾ ಬಾಗ್ ಹೇಗೆ ತಲುಪಿದ ತಿಳಿಯದು. ಅವನು ಅದರಲ್ಲಿ ಭಾಗಿಯಾಗಿದ್ದು ನಮಗೆ ಟಿವಿ ನೋಡಿದ ನಂತರವೇ ತಿಳಿದಿದ್ದು ಎಂದು ಕಪಿಲ್ ಚಿಕ್ಕಪ್ಪ ಫತೇ ಸಿಂಗ್ ಹೇಳಿದರು.
ಬಂಧಿತ ಕಪಿಲ್ ದೆಹಲಿ ನೋಯ್ಡಾ ಬಳಿಯ ದಲ್ಲುಪುರದ ನಿವಾಸಿ. ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಪಿಲ್ನ ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಆಗಿತ್ತು. ಸಂಬಂಧಿಕರ ಮದುವೆಗೆಂದು ತೆರಳುತ್ತಿದ್ದ ಕಪಿಲ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದ ಬೇಸರಗೊಂಡು ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ತಿಳಿಸಿದ್ದಾನೆ ಎಂದು ಡಿಸಿಪಿ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)