More

    ಸಾವರ್ಕರ್ ಬಗ್ಗೆ ಚರ್ಚೆಯೇ ರಾಷ್ಟ್ರದ್ರೋಹ: ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ಸ್ವಾತಂತ್ರ್ಯವೀರ ಸಾವರ್ಕರ್ ಬಗ್ಗೆ ಚರ್ಚೆ ಮಾಡೋದೇ ದೊಡ್ಡ ರಾಷ್ಟ್ರದ್ರೋಹ ಕೆಲಸ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಎಷ್ಟು ವರ್ಷ ಅಂಡಮಾನ್ ಜೈಲಿನಲ್ಲಿದ್ದರು. ಆ ರಾಷ್ಟ್ರಭಕ್ತನ ಬಗ್ಗೆ ತಿಳಿದುಕೊಳ್ಳಲು ವಿರೋಧಿಸುವವರು ಒಮ್ಮೆ ಅಂಡಮಾನ್ ಜೈಲಿನ ಸೆಲ್ ನೋಡಿಕೊಂಡು ಬರಲಿ ಎಂದು ಸಲಹೆ ನೀಡಿದರು. ಅಲ್ಲಿಗೆ ಭೇಟಿ ಕೊಡುವುದರಿಂದ ಜೈಲು ಹೇಗಿದೆ ಎಂದು ಗೊತ್ತಾಗುತ್ತದೆ ಎಂದರು.
    14 ವರ್ಷ ಜೈಲಿನಲ್ಲಿದ್ದು ಜತೆಗೆ ಕಠಿಣ ಶಿಕ್ಷೆ ಅನುಭವಿಸಿದ್ದ ಸಾವರ್ಕರ್ ಅವರನ್ನು ಓಟಿಗಾಗಿ ವಿರೋಧಿಸಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ ಇರುವವರೆಲ್ಲರೂ ವಿರೋಧಿಸುತ್ತಿಲ್ಲ. ಆದರೆ ಕೆಲ ರಾಷ್ಟ್ರದ್ರೋಹಿಗಳು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.
    ಸಿದ್ದರಾಮಯ್ಯ ಉಡುಪಿಗೆ ಹೋಗಿ ಬರಲಿ: ಬಾಳೇಹೊನ್ನೂರು ರಂಭಾಪುರಿಮಠ ಮತ್ತು ಕನಕಗುರು ಪೀಠಕ್ಕೆ ಭೇಟಿ ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉಡುಪಿಯ ಶ್ರೀ ಕೃಷ್ಣಮಠಕ್ಕೂ ಭೇಟಿ ನೀಡಲಿ ಎಂದು ಈಶ್ವರಪ್ಪ ಕಾಲೆಳೆದಿದರು.
    ಸಿದ್ದರಾಮಯ್ಯ ಉಡುಪಿ ಕೃಷ್ಣನ ದರ್ಶನ ಪಡೆಯಬೇಕು. ಕನಕದಾಸರ ಭಕ್ತರಿಗೆ ಮೆಚ್ಚಿ ಕೃಷ್ಣ ದರ್ಶನ ನೀಡಿದ್ದಾನೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೇ ಹೋಗಿಲ್ಲ ಎನ್ನುವ ಅನುಮಾನ ಎಲ್ಲರಂತೆ ನನಗೂ ಇದೆ. ಈ ಎಲ್ಲ ಅನುಮಾನ ದೂರ ಮಾಡಲು ಸಿದ್ದರಾಮಯ್ಯ ಉಡುಪಿ ಕೃಷ್ಣನ ದರ್ಶನ ಪಡೆಯಲಿ. ಇದರಿಂದ ಸಿದ್ದುಗೆ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ. ಜತೆಗೆ ಅವರಿಗೆ ಒಳ್ಳೆಯದಾಗುತ್ತದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts