More

    ಜು.23 ರಂದು ಸಂತೆ ಜಾತ್ರೆ ನಿಷೇಧ

    ಗ್ರಾಮ ಪಂಚಾಯತ್ ಉಪಚುನಾವಣೆ-2023ರ ಮತದಾನದ ಸಂಬoಧ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದoತೆ ಮತ್ತು ಶಾಂತಿಯುತವಾಗಿ ಮತದಾನ ನಡೆಸುವ ಸಂಬoಧ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಕೆಲ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜುಲೈ 22 ರ ಮಧ್ಯರಾತ್ರಿ 12 ಗಂಟೆಯಿoದ ಜುಲೈ 23 ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ವಿಧದ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಅಂದು ನಂಜನಗೂಡು ತಾಲೂಕಿನ ದೇವನೂರು ಹಾಗೂ ದೇವರಾಯಶೆಟ್ಟಿ, ನರಸೀಪುರ ತಾಲೂಕಿನ ಹೆಮ್ಮಿಗೆ, ಹುಣಸೂರು ತಾಲೂಕಿನ ಜಾಬಗೆರೆ, ತಟ್ಟೆಕೆರೆ ಹಾಗೂ ಕಟ್ಟೆಮನುಗನಹಳ್ಳಿ, ಕೃಷ್ಣರಾಜನಗರ ತಾಲೂಕಿನ ಹಂಪಾಪುರ, ಹೆಚ್ ಡಿ ಕೋಟೆ ತಾಲೂಕಿನ ಮಾದಾಪುರ ಹಾಗೂ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts