More

    ಕೆಲವು ವಿಚಾರದಲ್ಲಿ ನನ್ನ ಫ್ಯಾಮಿಲಿಯನ್ನು ಟಾರ್ಗೆಟ್​ ಮಾಡಲಾಗಿತ್ತು; ಫ್ಯಾನ್​ವಾರ್​ ಕುರಿತು ಸಂಗೀತಾ ಹೇಳಿದ್ದೇನು

    ಬೆಂಗಳೂರು: ಈ ಬಾರಿಯ ಬಿಗ್​ಬಾಸ್​ 10ನೇ ಆವೃತ್ತಿ ಮುಗಿದು ಎರಡು ವಾರಗಳು ಕಳೆಯುತ್ತ ಬಂದರೂ ವೀಕ್ಷಕರು ಮಾತ್ರ ಅದರ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆದಿದ್ದ ಬಿಗ್​ಬಾಸ್​ ಸೀಸನ್ 10ರ ಪ್ರಮುಖ ಸ್ಫರ್ಧಿ ಸಂಗೀತಾ ಶೃಂಗೇರಿ ಅದ್ಭುತವಾಗಿ ಆಡುವ ಮೂಲಕ ಜನರ ಗಮನ ಸೆಳೆದಿದ್ದರು.

    ಸ್ಫರ್ಧಿಗಳ ಜೊತೆ ಜಗಳದಿಂದಾಗಿ ಹೆಚ್ಚು ಸದ್ದು ಮಾಡಿದ್ದ ಸಂಗೀತಾ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಅವರೊಟ್ಟಿಗಿನ ಭಿನ್ನಾಭಿಪ್ರಾಯ ಇದೆಲ್ಲಕ್ಕಿಂತ ಜೋರಾಗಿ ಸದ್ದು ಮಾಡಿತ್ತು. ಈ ವಿಚಾರ ಸಂಗೀತಾ-ಕಾರ್ತಿಕ್​ ಹಾಗೂ ಸಂಗೀತಾ-ವಿನಯ್​ ಫ್ಯಾನ್ಸ್​ ನಡುವಿನ ವಾರ್​ಗೆ ಕಾರಣವಾಗಿತ್ತು. ಇದು ಎಷ್ಟರ ಮಟ್ಟಿಗೆ ತಲುಪಿತ್ತು ಎಂದರೆ ವೈಯಕ್ತಿಕ ಟೀಕೆಗಳನ್ನು ಸಹ ಮಾಡಲಾಗಿತ್ತು. ಇನ್ನು ಈ​ ಕುರಿತು ಮಾತನಾಡಿರುವ ಸಂಗೀತಾ ಶೃಂಗೇರಿ, ಜಗಳ ಬೇಡ, ಎಲ್ಲವನ್ನೂ ಮರೆತು ಸಾಮರಸ್ಯದಿಂದ ಇರಿ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಏಕದಿನ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ; ಟೀಂ ಇಂಡಿಯಾ ಬಳಿಕ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರ

    ನಾವು ಬಿಗ್​ಬಾಸ್​ ಮನೆ ಅಲ್ಲಿ ಇರಬೇಕಾದರೆ ಫ್ಯಾನ್​ವಾರ್​ ನಡೆಯುತ್ತಿದ್ದ ಬಗ್ಗೆ ನನಗೆ ಏನು ತಿಳಿದಿಲ್ಲ. ಹೊರಗಡೆ ಬಂದ ಬಳಿಕ ಈ ವಿಚಾರಗಳು ತಿಳಿದಾಗ ನನಗೆ ತುಂಬಾ ಬೇಸರವಾಯಿತು. ಕೆಲವು ವಿಚಾರಗಳಲ್ಲಿ ನನ್ನ ಕುಟುಂಬದವರನ್ನು ಗುರಿಯಾಗಿಸಿ ಮಾತನಾಡಿರುವುದು ಬೇಸರ ತರಿಸಿದೆ. ನಾನು ಫ್ಯಾನ್ಸ್​ಗೆ ಹೇಳುವುದೇನೆಂದರೆ ನಾವು ಮನೆಯೊಳಗೆ ಇರಬೇಕಾದರೆ ಆಟದ ಸಲುವಾಗಿ ಟ್ರೋಫಿ ಗೆಲ್ಲುವ ಸಲುವಾಗಿ ಮಾತನಾಡಿದ್ದೇವೆ ಹೊರತು ಯಾರು ಕೂಡ ವೈಯಕ್ತಿಕವಾಗಿ ಮಾತನಾಡಿಲ್ಲ.

    ನಾವು ಬಿಗ್​ಬಾಸ್​ ಮನೆಯಿಂದ ಹೊರಬಂದ ಬಳಿಕ ಆಟ ಮುಗಿಯುತ್ತದೆ. ಅದಾದ ಬಳಿಕ ಮನೆಯೊಳಗೆ ನಡೆದ ವಿಚಾರಗಳನ್ನು ನಾವು ಯಾರು ಮನಸ್ಸನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವೆಲ್ಲರೂ ಮನೆಯಿಂದ ಹೊರಬಂದ ಬಳಿಕ ಮನಸ್ತಾಪವನ್ನು ಬಿಟ್ಟು ಒಂದಾಗಿದ್ದು, ನೀವೆಲ್ಲರೂ ಕೂಡ ಫ್ಯಾನ್​ವಾರ್​ ಬಿಟ್ಟು ಒಂದಾದರೆ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಬಹುದಾಗಿದೆ. ಜಗಳ ಬೇಡ, ಎಲ್ಲವನ್ನೂ ಮರೆತು ಸಾಮರಸ್ಯದಿಂದ ಇರಿ ಎಂದು ಬಿಗ್​ಬಾಸ್​ ಸ್ಫರ್ಧಿ ಸಂಗೀತಾ ಶೃಂಗೇರಿ ಕರೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts