ಬೆಂಗಳೂರು: ಈ ಬಾರಿಯ ಬಿಗ್ಬಾಸ್ 10ನೇ ಆವೃತ್ತಿ ಮುಗಿದು ಎರಡು ವಾರಗಳು ಕಳೆಯುತ್ತ ಬಂದರೂ ವೀಕ್ಷಕರು ಮಾತ್ರ ಅದರ ಗುಂಗಿನಿಂದ ಇನ್ನೂ ಹೊರಬಂದಿಲ್ಲ. ಒಂದಿಲ್ಲೊಂದು ಕಾರಣಕ್ಕೆ ಪ್ರೇಕ್ಷಕರ ಗಮನ ಸೆಳೆದಿದ್ದ ಬಿಗ್ಬಾಸ್ ಸೀಸನ್ 10ರ ಪ್ರಮುಖ ಸ್ಫರ್ಧಿ ಸಂಗೀತಾ ಶೃಂಗೇರಿ ಅದ್ಭುತವಾಗಿ ಆಡುವ ಮೂಲಕ ಜನರ ಗಮನ ಸೆಳೆದಿದ್ದರು.
ಸ್ಫರ್ಧಿಗಳ ಜೊತೆ ಜಗಳದಿಂದಾಗಿ ಹೆಚ್ಚು ಸದ್ದು ಮಾಡಿದ್ದ ಸಂಗೀತಾ ಬಿಗ್ಬಾಸ್ ವಿನ್ನರ್ ಕಾರ್ತಿಕ್ ಅವರೊಟ್ಟಿಗಿನ ಭಿನ್ನಾಭಿಪ್ರಾಯ ಇದೆಲ್ಲಕ್ಕಿಂತ ಜೋರಾಗಿ ಸದ್ದು ಮಾಡಿತ್ತು. ಈ ವಿಚಾರ ಸಂಗೀತಾ-ಕಾರ್ತಿಕ್ ಹಾಗೂ ಸಂಗೀತಾ-ವಿನಯ್ ಫ್ಯಾನ್ಸ್ ನಡುವಿನ ವಾರ್ಗೆ ಕಾರಣವಾಗಿತ್ತು. ಇದು ಎಷ್ಟರ ಮಟ್ಟಿಗೆ ತಲುಪಿತ್ತು ಎಂದರೆ ವೈಯಕ್ತಿಕ ಟೀಕೆಗಳನ್ನು ಸಹ ಮಾಡಲಾಗಿತ್ತು. ಇನ್ನು ಈ ಕುರಿತು ಮಾತನಾಡಿರುವ ಸಂಗೀತಾ ಶೃಂಗೇರಿ, ಜಗಳ ಬೇಡ, ಎಲ್ಲವನ್ನೂ ಮರೆತು ಸಾಮರಸ್ಯದಿಂದ ಇರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಏಕದಿನ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ; ಟೀಂ ಇಂಡಿಯಾ ಬಳಿಕ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರ
ನಾವು ಬಿಗ್ಬಾಸ್ ಮನೆ ಅಲ್ಲಿ ಇರಬೇಕಾದರೆ ಫ್ಯಾನ್ವಾರ್ ನಡೆಯುತ್ತಿದ್ದ ಬಗ್ಗೆ ನನಗೆ ಏನು ತಿಳಿದಿಲ್ಲ. ಹೊರಗಡೆ ಬಂದ ಬಳಿಕ ಈ ವಿಚಾರಗಳು ತಿಳಿದಾಗ ನನಗೆ ತುಂಬಾ ಬೇಸರವಾಯಿತು. ಕೆಲವು ವಿಚಾರಗಳಲ್ಲಿ ನನ್ನ ಕುಟುಂಬದವರನ್ನು ಗುರಿಯಾಗಿಸಿ ಮಾತನಾಡಿರುವುದು ಬೇಸರ ತರಿಸಿದೆ. ನಾನು ಫ್ಯಾನ್ಸ್ಗೆ ಹೇಳುವುದೇನೆಂದರೆ ನಾವು ಮನೆಯೊಳಗೆ ಇರಬೇಕಾದರೆ ಆಟದ ಸಲುವಾಗಿ ಟ್ರೋಫಿ ಗೆಲ್ಲುವ ಸಲುವಾಗಿ ಮಾತನಾಡಿದ್ದೇವೆ ಹೊರತು ಯಾರು ಕೂಡ ವೈಯಕ್ತಿಕವಾಗಿ ಮಾತನಾಡಿಲ್ಲ.
ನಾವು ಬಿಗ್ಬಾಸ್ ಮನೆಯಿಂದ ಹೊರಬಂದ ಬಳಿಕ ಆಟ ಮುಗಿಯುತ್ತದೆ. ಅದಾದ ಬಳಿಕ ಮನೆಯೊಳಗೆ ನಡೆದ ವಿಚಾರಗಳನ್ನು ನಾವು ಯಾರು ಮನಸ್ಸನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವೆಲ್ಲರೂ ಮನೆಯಿಂದ ಹೊರಬಂದ ಬಳಿಕ ಮನಸ್ತಾಪವನ್ನು ಬಿಟ್ಟು ಒಂದಾಗಿದ್ದು, ನೀವೆಲ್ಲರೂ ಕೂಡ ಫ್ಯಾನ್ವಾರ್ ಬಿಟ್ಟು ಒಂದಾದರೆ ಕರ್ನಾಟಕದಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಬಹುದಾಗಿದೆ. ಜಗಳ ಬೇಡ, ಎಲ್ಲವನ್ನೂ ಮರೆತು ಸಾಮರಸ್ಯದಿಂದ ಇರಿ ಎಂದು ಬಿಗ್ಬಾಸ್ ಸ್ಫರ್ಧಿ ಸಂಗೀತಾ ಶೃಂಗೇರಿ ಕರೆ ನೀಡಿದ್ದಾರೆ.