ಮೈಸೂರು: ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆನ್ನಲಾದ ಪ್ರಕರಣವು ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುವಾಗ ನನಗೆ ಕನ್ನಡ ಬರಲ್ಲ ಅಂದಿದ್ದ ಹೋಟೆಲ್ ಸಿಬ್ಬಂದಿ ಇದೀಗ ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಸಮೀರ್ ಹೆಸರಿನ ಹೋಟೆಲ್ ಸಿಬ್ಬಂದಿ ನಿನ್ನೆ ಹೇಳಿದ್ದೇ ಬೇರೆ,ಇವತ್ತು ಹೇಳ್ತಿರೋದೇ ಬೇರೆ, ನಿನ್ನೆ ಕನ್ನಡ ಬರಲ್ಲ ಎಂದಿದ್ದ ಸಮೀರ್, ಆದರೆ, ಕನ್ನಡದಲ್ಲೇ ಮಾತನಾಡಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಜೂನ್ 24ರಂದು ಸಪ್ಲೈಯರ್ಗೆ ಹೊಡೆದಿದ್ರೆಂತೆ ನಾನು ಅದನ್ನು ನೋಡಿಲ್ಲ. ಆ ದಿನ ನಾನು ಇರಲಿಲ್ಲ. ಹೊಡೆದಿದ್ದಾರೋ? ಇಲ್ಲವೋ ಗೊತ್ತಿಲ್ಲ. ಆದರೆ, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರೆ ಎಲ್ಲವೂ ಗೊತ್ತಾಗುತ್ತದೆ. ಸಿಬ್ಬಂದಿ ಅಲ್ವಾ ಸರ್ ಹೊಡೆಯೋದು ಏಕೆ? ಏನಾದ್ರೂ ಇದ್ರೆ ಮಾತನಾಡಬಹುದಿತ್ತಲ್ವಾ ಎಂದು ಸಮೀರ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಇನ್ನೊಂದು ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ ಜೂನ್ 24ರಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಹೋಟೆಲ್ನ ಸ್ವಿಮ್ಮಿಂಗ್ ಫೂಲ್ ಏರಿಯಾದಲ್ಲಿ ಇರುವ ಜಾಗದಲ್ಲಿ ಹತ್ತರಿಂದ ಹದಿನೈದು ಜನರನ್ನು ಕರೆಸಿಕೊಂಡು ಮಿನಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯೆಲ್ಲ ಮುಗಿಯಿತು. ತುಂಬಾ ಮದ್ಯಪಾನ ಮಾಡಿದ್ದರು. ಯಾವುದೋ ಒಂದು ಐಟಂ ಕೊಡಲಿಲ್ಲ ಅಂತಾ ಮದ್ಯದ ಅಮಲಿನಲ್ಲಿ ಸಪ್ಲೈಯರ್ಗೆ ಹೊಡೆದರು. ಅದರಿಂದ ಸಪ್ಲೈಯರ್ ಕೂಡ ಕಣ್ಣೀರಾಕಿದರು. ಕಪಾಳ ಮತ್ತು ಕಿವಿ ಸೇರಿಸಿ ಹೊಡೆದಿದ್ದರಿಂದ ನೋವಿನಿಂದ ಸಪ್ಲೈಯರ್ ಅಳುತ್ತಿದ್ದ ಎಂದು ಸೆಕ್ಯುರಿಟಿ ಗಾರ್ಡ್ ಹೇಳಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೊಡೆದಿದ್ದು ಮಾತ್ರವಲ್ಲದೆ, ಕೆಟ್ಟದಾಗಿ ನಿಂದಿಸಿದರು. ಸೆಕ್ಯುರಿಟಿಗಳಿಗೂ ಬೈದರು. ಅಲ್ಲದೆ, ತನ್ನ ಬಳಿಯಿದ್ದ ಹಣವನ್ನು ಎರಚಿ ಹೋಟೆಲ್ ಮಾಲೀಕರ ವಿರುದ್ಧವೂ ಕೂಗಾಡಿದರು ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿರುವುದು ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಅಂದು ರಾತ್ರಿ ದರ್ಶನ್ ಅವರ ವರ್ತನೆ ಹೇಗಿತ್ತು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ಘಟನೆ ನಡೆದ ದಿನದಂದು ಇವರೆಲ್ಲರೂ ಪ್ರತ್ಯಕ್ಷದರ್ಶಿಗಳಾಗಿದ್ದರಂತೆ.
ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ದೆಹಲಿಯಿಂದಲೇ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿಎಂ ಬಿಎಸ್ವೈ
ಎಲ್ಪಿಜಿ ಸಿಲಿಂಡರ್ ಮೇಲೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಇಷ್ಟೊಂದು ತೆರಿಗೆ ಪಡೆಯುತ್ತಾ? ಇಲ್ಲಿದೆ ಅಸಲಿ ವಿಚಾರ!