ಬೆಂಗಳೂರು: ತನ್ನ ಪತ್ನಿ ಮತ್ತು ನಾದಿನಿಯನ್ನೇ ಕೊಂದಿದ್ದ ಸ್ಯಾಂಡಲ್ವುಡ್ ಮ್ಯೂಸಿಕ್ ಡೈರಕ್ಟರ್, ವೀಣಾ ವಿದ್ವಾಂಸ ಚಂದ್ರಶೇಖರ್ಗೆ ಜೀವಾವಧಿ ಶಿಕ್ಷೆಯಾಗಿದೆ.
ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2013ರಲ್ಲಿ ಪ್ರೀತಿ ಆಚಾರ್ಯ ಮತ್ತು ವೇದಾ ಎಂಬುವವರ ಕೊಲೆಯಾಗಿತ್ತು. ಇವರಿಬ್ಬರೂ ಅಕ್ಕ-ತಂಗಿ. ಚಂದ್ರಶೇಖರ್ ಪ್ರೀತಿ ಆಚಾರ್ಯಳ ಗಂಡ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಇದೇ ಕಾರಣಕ್ಕೆ ಕೊಲೆಗೆ ಸಂಚು ರೂಪಿಸಿದ್ದ ಚಂದ್ರಶೇಖರ್, ಅಂದು ಮನೆಗೆ ಬಂದ ಪತ್ನಿ-ನಾದಿಯಗೆ ಕುಡಿಸಿ ಬಳಿಕ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದ. ಇದನ್ನೂ ಓದಿರಿ ಕೂಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ಮನೆಗೆ ಹೊರಟವರ ಪ್ರಾಣ ಹೊತ್ತೊಯ್ದ ಜವರಾಯ!
ಡಬಲ್ ಮರ್ಡರ್ ಕೇಸ್ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 8 ವರ್ಷಗಳ ಬಳಿಕ ಅಪರಾಧಿಗೆ ಜೀವವಾಧಿ ಶಿಕ್ಷೆ ವಿಧಿಸಿ ನಿನ್ನೆ (ಫೆ.24) ಸಿಸಿಎಚ್- 70 ಕೋರ್ಟಿನ ನ್ಯಾಯಾಧೀಶ ಗುರುರಾಜ್ ಸೋಮಕ್ಕಳನವರ ತೀರ್ಪು ಪ್ರಕಟಿಸಿದ್ದಾರೆ.
ಸತತ 8 ವರ್ಷಗಳ ಕಾಲ ವಾದ ಮಂಡಿಸಿದ್ದ ಸರ್ಕಾರಿ ಪರ ಅಭಿಯೋಜಕಿ ಎಚ್.ಆರ್. ಸತ್ಯವತಿ, ಅಪರಾಧಿಗೆ ಮರಣ ದಂಡನೆ ನೀಡಲು ಮೇಲ್ಮನವಿ ಸಲ್ಲಿಸಿದ್ದರು.
ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್ ನೆನೆಯಲಿ
ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!