ಬೆಂಗಳೂರು: ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ವೀರೇನ್ ಖನ್ನಾಗೆ ಸಹಕರಿಸಿದ ಆರೋಪದಲ್ಲಿ ಎಸಿಪಿ ಮುದವಿ ಅವರನ್ನು ಅಮಾನತುಗೊಳಸಲು ಸಿಸಿಬಿ ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ.
ಎಸಿಪಿ ಮಾತ್ರವಲ್ಲದೆ ಪೇದೆ ಮಲ್ಲಿಕಾರ್ಜುನ್ ಸಹ ಕಂಟಕ ಎದುರಾಗಿದೆ. ವೀರೇನ್ ಖನ್ನಾ ಬಳಿ ಎಸಿಪಿ ಮುದವಿ 50 ಲಕ್ಷಕ್ಕೆ ಡೀಲ್ ಕುದುರಿಸಿದ್ದರು ಎನ್ನಲಾಗಿದೆ. ಕಾನ್ಸ್ಟೇಬಲ್ ಮಲ್ಲಿಕಾರ್ಜುನ್ ಮೂಲಕ ರಾತ್ರಿ 10.30ರ ನಂತರ ಖನ್ನಾಗೆ ಮೊಬೈಲ್ ನೀಡಿ ಜಾಮೀನು ನೀಡಲು ಸಹಕರಿಸುವುದಾಗಿ ಹೇಳಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಬಾಲಾಕೋಟ್ ಏರ್ಸ್ಟ್ರೈಕ್ ಸಿನಿಮಾ; ಅಭಿನಂದನ್ ಪಾತ್ರಕ್ಕೆ ದಕ್ಷಿಣದ ಖ್ಯಾತ ನಟ!
ಹೀಗಾಗಿ ಖನ್ನಾಗೆ ಸಹಕರಿಸಿದ ಆರೋಪದ ಮೇಲೆ ಎಸಿಪಿ ಮತ್ತು ಕಾನ್ಸ್ಟೇಬಲ್ ಅಮಾನತಿಗೆ ಗೃಹ ಸಚಿವರ ಬಳಿ ಸಿಸಿಬಿ ಶಿಫಾರಸು ಮಾಡಿದೆ. ಅಂದಹಾಗೆ ಮುದವಿ ಅವರು ಸಿಸಿಬಿಯ ಮಹಿಳಾ ಸಂರಕ್ಷಣಾ ಘಟಕದ ಎಸಿಪಿಯಾಗಿದ್ದಾರೆ.
ವೀರೇನ್ ಖನ್ನಾ ಬೆಂಗಳೂರಿನ ಬಹುತೇಕ ಪೇಜ್-3 ಪಾರ್ಟಿಗಳ ಆಯೋಜಕ. ದೆಹಲಿ ಮೂಲದ ಖನ್ನಾ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಆರ್ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದ. ಇದರ ನಡುವೆ ಇವೆಂಟ್ ಮ್ಯಾನೇಜ್ಮೆಂಟ್ ಶುರು ಮಾಡಿದ್ದ. ಬಹುತೇಕ ಸ್ಟಾರ್ ಹೋಟೆಲ್ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ. ಈ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡ್ತಿದ್ದ ಎಂದ ಆರೋಪ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್)
ಸಿಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ದೆಹಲಿಯಲ್ಲಿ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಬಂಧನ!