More

    ಪುದುಚೇರಿಯಲ್ಲಿ ‘ಗಯ್ಯಾಳಿ’ ನಿರ್ದೇಶಕಿ ಸುಮನಾ ಕಿತ್ತೂರು ವಿವಾಹ

    ಬೆಂಗಳೂರು: ನಿರ್ದೇಶಕಿ ಸುಮನಾ ಕಿತ್ತೂರು ತಮ್ಮ ಬಹುಕಾಲದ ಗೆಳೆಯ ಶ್ರೀನಿವಾಸ್ ಅವರನ್ನು ವರಿಸಿದ್ದಾರೆ. ಏಪ್ರಿಲ್​ 17ರಂದೇ ಪುದುಚೇರಿಯಲ್ಲಿಯೇ ಈ ಜೋಡಿ ವಿವಾಹವಾಗಿದ್ದು, ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಳ ವಿವಾಹದ ಮೊರೆ ಹೋಗಿದೆ.
    ಶಿವಮೊಗ್ಗ ಮೂಲದ ಶ್ರೀನಿವಾಸ್ ಪುದುಚೇರಿಯಲ್ಲಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸುಮನಾ ಸಹ ಕಳೆದೊಂದು ವರ್ಷದಿಂದ ಪುದುಚೇರಿಯಲ್ಲಿಯೇ ವಾಸವಾಗಿದ್ದಾರೆ. ಕುಪ್ಪಳ್ಳಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ವಿವಾಹ ಆಗಬೇಕೆಂದುಕೊಂಡಿದ್ದ ಜೋಡಿಗೆ ಲಾಕ್​ಡೌನ್​ ಅಡ್ಡಿಯಾಗಿತ್ತು.
    ಆ ದಿನಗಳು ಸಿನಿಮಾ ಮೂಲಕ ಸಹಾಯಕ ನಿರ್ದೇಶಕಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ನೀಡಿದ್ದ ಸುಮನಾ, ಬಳಿಕ ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾ ನಿರ್ದೇಶನ ಮಾಡಿದ್ದಾರೆ.
    https://www.vijayavani.net/veteran-actor-kiran-kumar-tests-positive-for-coronavirus/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts