ಸ್ಯಾಂಡಲ್ವುಡ್ ನಟ ದರ್ಶನ್ ಸಿನಿಮಾದ ಜತೆಗೆ ಕಾಡಿನ ನಂಟು ಇದೆ. ಪ್ರಾಣಿ ಪಕ್ಷಿಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿಯುವ ಅವರು, ಮೈಸೂರು ಮೃಗಾಲಯದಲ್ಲಿನ ಹಲವು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ. ಇತ್ತ ಮೈಸೂರಿನಲ್ಲಿರುವ ಫಾರ್ಮ್ಹೌಸ್ನಲ್ಲಿ ಕೃಷಿ ಸಂಬಂಧಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತೆಗೆ ದೇವಸ್ಥಾನ, ಮಠಗಳಿಗೂ ದರ್ಶನ್ ಆಗಾಗ ಭೇಟಿ ನೀಡಿ ಬರುತ್ತಾರೆ. ಅದೇ ರೀತಿ ಭಾನುವಾರ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 105ನೇ ಜಯಂತಿ ಮಹೋತ್ಸವದ ಅಂಗವಾಗಿ ನಂಜನಗೂಡಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದಿದ್ದಾರೆ. ಆ ಭೇಟಿಯ ಕ್ಷಣಗಳು ಇಲ್ಲಿವೆ.
ಪ್ರಭಾಸ್ ‘ಆದಿಪುರುಷ್’ ಸಿನಿಮಾದಲ್ಲಿ ಪ್ರಧಾನಿ ಮೋದಿಯೂ ಇರಲಿದ್ದಾರೆ!; ಪಾತ್ರ ಏನಿರಬಹುದು?