ಹೈದರಾಬಾದ್ : ಕೇರಳದ ಪಿಣರಾಯಿ ವಿಜಯನ್ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಿಟೆಕ್ಸ್ ಗಾರ್ಮೆಂಟ್ಸ್ ಮಾಲೀಕ ಸಬು ಜೇಕಬ್ ಈಗ ತೆಲಂಗಾಣದತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೇರಳದ ನಷ್ಟ, ತೆಲಂಗಾಣಕ್ಕೆ ಲಾಭವಾಗಿ ಪರಿಣಮಿಸಲಿದೆ ಎನ್ನಲಾಗಿದೆ.
ಜಗತ್ತಿನ ಎರಡನೇ ಅತಿದೊಡ್ಡ ಮಕ್ಕಳ ಉಡುಪು ಉತ್ಪಾದಕ ಕಂಪೆನಿ ಕಿಟೆಕ್ಸ್ನ 3,500 ಕೋಟಿ ರೂ. ಯೋಜನೆಯನ್ನು ಕೇರಳದಲ್ಲಿ ಮಾಡುವುದಿಲ್ಲ ಎಂದು ಈ ಮುನ್ನ ಜಾಕಬ್ ಘೋಷಿಸಿದ್ದರು. ತಾವು ಸ್ವತಃ ತಮ್ಮ ಮೂಲ ರಾಜ್ಯ ಕೇರಳದಿಂದ ಹೊರಹೋಗುತ್ತಿಲ್ಲ, ತಮ್ಮನ್ನು ಅಲ್ಲಿಂದ ಅಟ್ಟಲಾಗುತ್ತಿದೆ ಎಂದು ನೊಂದು ನುಡಿದಿದ್ದರು. ತದನಂತರ ತೆಲಂಗಾಣ ಮತ್ತು ಇತರ 9 ರಾಜ್ಯಗಳು ಅವರನ್ನು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದವು ಎನ್ನಲಾಗಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಮೊಬೈಲ್ ಫೋನು ಎಂದು ದುಡ್ಡು ಪೀಕುತ್ತಿದ್ದ ಖದೀಮರು!
ನಿನ್ನೆಯ ದಿನ ಕಿಟೆಕ್ಸ್ನ ಎಂಡಿ ಆದ ಸಬು ಜಾಕಬ್ನ ತಂಡ ವಿಶೇಷ ವಿಮಾನದಲ್ಲಿ ಕೊಚಿಯಿಂದ ಹೈದರಾಬಾದ್ಗೆ ತೆರಳಿದ್ದು, ಸಂಜೆಯ ವೇಳೆಗೆ ತೆಲಂಗಾಣದ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಅವರು, ಕಂಪೆನಿಯು ರಾಜ್ಯದಲ್ಲಿ 1,000 ಕೋಟಿ ರೂ. ಆರಂಭಿಕ ಹೂಡಿಕೆ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ವಾರಂಗಲ್ನ ಕೆಎಂಟಿಪಿಯಲ್ಲಿ ಕಿಟೆಕ್ಸ್ ಕಾರ್ಖಾನೆಗಳು ಆರಂಭವಾಗಲಿವೆ ಎಂದಿದ್ದಾರೆ. (ಏಜೆನ್ಸೀಸ್)
13 ವರ್ಷದ ಬಾಲಕಿಗೆ ಅಸಂಬದ್ಧ ಪ್ರಶ್ನೆ ಕೇಳಿದ್ದ ಬಸ್ ಕಂಡಕ್ಟರ್ಗೆ 1 ವರ್ಷ ಜೈಲು