ತಿರುವನಂತಪುರ: ತಿರುವಾಂಕೂರು ದೇವಸ್ವ ಮಂಡಳಿ ಹಾಗೂ ಶಬರಿಮಲೆ ದೇಗುಲದ ಮುಖ್ಯ ತಂತ್ರಿ ಕಾಂತರಾರು ಮಹೇಶ್ ಮೋಹನಾರು ಅವರೊಂದಿಗೆ ಸಭೆ ನಡೆಸಿದ ಕೇರಳ ಸರ್ಕಾರ, ಶಬರಿಮಲೆ ದೇಗುಲದ ಪ್ರವೇಶವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದೆ. ಇದಲ್ಲದೇ, ಇದೇ ತಿಂಗಳ 19ರಂದು ನಡೆಯಬೇಕಿದ್ದ ಉತ್ಸವವನ್ನು ರದ್ದುಗೊಳಿಸಿದೆ.
ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ನೇತೃತ್ವದಲ್ಲಿ, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ 14ರಂದು ಆರಂಭಗೊಳ್ಳಬೇಕಿದ್ದ ದೇಗುಲ ಪ್ರವೇಶ ಮುಂದೂಡಿದಂತಾಗಿದೆ.
ಇದನ್ನೂ ಓದಿ; ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್; ರಾಜ್ಯ ಕ್ರಿಕೆಟ್ ಮಂಡಳಿಗಳಿಗೆ ಗಂಗೂಲಿ ಪತ್ರ
ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಮುಖ್ಯ ತಂತ್ರಿ ವಿರೋಧಿಸಿದ್ದರು. ಜತೆಗೆ, ಬಿಜೆಪಿ ಕೂಡ ಇದಕ್ಕೆ ಬೆಂಬಲ ನೀಡಿತ್ತು. ಮುಖ್ಯ ತಂತ್ರಿಗಳ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಬೇಕೆಂದು ಒತ್ತಾಯಿಸಿತ್ತು.
ಈ ನಡುವೆ, ಮುಜರಾಯಿ ಆಯುಕ್ತರು ದೇಗುಲವನ್ನು ತೆರೆಯುವ ಬಗ್ಗೆ ಸಿಎಂ ಸಭೆಗೂ ಮುನ್ನ ಹಾಗೂ ನಂತರ ತನ್ನೊಂದಿಗೆ ಚರ್ಚಿಸಿದ್ದರು. ಅಲ್ಲದೇ, ದೇವಸ್ವಂ ಮಂಡಳಿ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ದೇಗುಲದ ಮುಖ್ಯ ಅರ್ಚಕ ಮಹೇಶ್ ಮೋಹನಾರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ; ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯನ್ನು ಮುಖ್ಯವಾಗಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಜೂನ್ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್ಡೌನ್ ; ಇಲ್ಲಿದೆ ಫ್ಯಾಕ್ಟ್ಚೆಕ್