More

    ಚಿನ್ನ ಕೊಡ್ಸಿ, ಒಳ್ಳೊಳ್ಳೆ ಬಟ್ಟೆ ಕೊಡ್ಸಿ… ಹೊರಗೆಲ್ಲಾ ಸುತ್ತಾಡಿಸಿ… ಅಂತಿದ್ದ ಪತ್ನಿಯ ಮಾತು ಕೇಳಿ ಕೇಳಿ ಪತಿ ಆತ್ಮಹತ್ಯೆ!

    ಬೆಂಗಳೂರು: ಪತ್ನಿಯ ಐಷಾರಾಮಿ ಜೀವನದ ಆಸೆಯನ್ನು ಪೂರೈಸಲಾಗದೇ ಮನನೊಂದುಕೊಂಡ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬಸವೇಶ್ವರ ನಗರದ ನಿವಾಸಿ ಚಾಂದ್ ಪಾಷಾ (31) ನೇಣಿಗೆ ಶರಣಾಗಿದ್ದಾರೆ. ಇವರು ನಾಲ್ಕು ತಿಂಗಳ ಹಿಂದೆ ಉಸ್ಮಾ ಎಂಬುವವರನ್ನು ಮದುವೆಯಾಗಿದ್ದರು. ಇದು ಪಾಷಾ ಮತ್ತು ಉಸ್ನಾ (26) ಇಬ್ಬರಿಗೂ ಎರಡನೆಯ ಮದುವೆ. ಇದೀಗ ಉಸ್ನಾ ಮೂರು ತಿಂಗಳ ಗರ್ಭಿಣಿ. ಮದುವೆಯಾದ ದಿನದಿಂದಲೂ ಚಿನ್ನಾಭರಣ, ಒಳ್ಳೊಳ್ಳೆ ಬಟ್ಟೆ, ಹೊರಗಡೆ ಸುತ್ತಾಟದ ಆಸೆ ಹೊತ್ತಿದ್ದರು ಉಸ್ನಾ, ಪಾಷಾ ಮೆಕ್ಯಾನಿಕಲ್‌ ಆಗಿ ಕೆಲಸ ಮಾಡುತ್ತಿದ್ದಾರೆ.

    ದಿನವೂ ಪತ್ನಿ ಐಷಾರಾಮಿ ವಸ್ತುಗಳನ್ನು ಕೇಳುತ್ತಿದ್ದರಿಂದ ಪಾಷಾಗೆ ರೋಸಿಹೋಗಿದೆ. ತನಗೆ ಬರುವ ದುಡಿಮೆಯಲ್ಲಿ ಇವೆಲ್ಲಾ ಪೂರೈಸಲು ಆಗುವುದಿಲ್ಲ ಎಂದಿದ್ದಾರೆ. ಆದರೆ ಇದೇ ವಿಷಯವಾಗಿ ದಂಪತಿ ನಡುವೆ ಮೇಲಿಂದ ಮೇಲೆ ಜಗಳವಾಗುತ್ತಲೇ ಇತ್ತು. ನಿನ್ನೆ ಕೂಡ ಇದೇ ವಿಷಯವಾಗಿ ಜಗಳವಾಗಿದೆ.

    ದಂಪತಿ ಇಬ್ಬರೂ ಜಗಳವಾಡಿಕೊಂಡು ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದಾರೆ. ಪತ್ನಿಯ ಆಸೆ ಈಡೇರಿಸಲು ಆಗದೇ, ಆಕೆಯಿಂದ ನಿತ್ಯವೂ ಈ ಎಲ್ಲಾ ಬೇಡಿಕೆಗಳ ಬಗ್ಗೆ ಕೇಳಿಕೇಳಿ ಮನನೊಂದುಕೊಂಡ ಪಾಷಾ ತಾವು ಮಲಗಿರುವ ಕೊಠಡಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅಕ್ಕ ಮೃತಪಟ್ಟರೆ ಆಕೆಯ ಮಕ್ಕಳಿಗೂ ನಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕಾ?

    VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts