ಬೆಂಗಳೂರು: ಕರೊನಾ ಕೇಸ್ ಹೆಚ್ಚು ಇರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯಕ್ಕೆ ಕಠಿಣ ನಿಯಮ ಅಳವಡಿಸಲಾಗಿದ್ದು, ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ.
ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಕೈಗಾರಿಕೆ, ಅಗತ್ಯ ಸೇವೆ ಬಿಟ್ಟು ಎಲ್ಲವೂ ಸ್ಥಗಿತಗೊಳ್ಳಲಿದೆ. ಬೆಂಗಳೂರಿನಲ್ಲಿ ದಿನನಿತ್ಯವೂ ಇರುವ ರಾತ್ರಿ ಕರ್ಫ್ಯೂ ಅವಧಿಯನ್ನು 10 ಗಂಟೆಯ ಬದಲು 9 ಗಂಟೆಗೆ ಮಾಡಲಾಗಿದೆ.
ವೀಕೆಂಡ್ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಜಿಲ್ಲೆಗಳು ಎಂದರೆ: ಚಾಮರಾಜನಗರ, ಮೈಸೂರು, ಮಂಗಳೂರು, ಮಡಿಕೇರಿ, ದಕ್ಷಿಣ ಕನ್ನಡ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಮತ್ತು ಬೀದರ್. ಈ ಕುರಿತು ಇಂದು ರಾತ್ರಿಯ ಒಳಗೆ ಅಧಿಕೃತ ಆದೇಶ ಹೊರಬೀಳಲಿದೆ. ಇದರಲ್ಲಿ ಸಂಪೂರ್ಣ ಮಾರ್ಗಸೂಚಿಯ ಕುರಿತು ವಿವರಿಸಲಾಗುವುದು.
ಶಾಲೆ, ಪಿಯು ಆರಂಭಕ್ಕೆ ಸಿಕ್ತು ಗ್ರೀನ್ ಸಿಗ್ನಲ್- ನೈಟ್ ಕರ್ಫ್ಯೂ ಸಮಯದಲ್ಲೂ ವ್ಯತ್ಯಾಸ: ಇಲ್ಲಿದೆ ಡಿಟೇಲ್ಸ್