ವಿಜಯನಗರ: ಮದುವೆಗಾಗಿ ಕಾತರನಾಗಿರುವ ಯುವಕನೊಬ್ಬ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.
ಚಿರಂಜೀವಿ (23) ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಈತನಿಗೆ ಹುಡುಗಿ ಫಿಕ್ಸ್ ಆಗಿದ್ದು, ಮದುವೆಗೆ ವಿಳಂಬ ಆಗುತ್ತಿದೆ. ಈ ಕಾರಣದಿಂದ ಸಿಟ್ಟಿಗೆದ್ದಿರುವ ಯುವಕ, ಹುಡುಗಿ ಫೀಕ್ಸ್ ಮಾಡಿದ ಮೇಲೆ ಮದುವೆ ಮಾಡೋದ್ಯಾಕೆ ತಡ ಎಂದು ಪ್ರತಿಭಟನೆ ರೂಪದಲ್ಲಿ ಟವರ್ ಏರಿದ್ದಾನೆ.
ಜಿರಂಜೀವಿಯ ಪಾಲಕರಿಗೆ ಇಬ್ಬರು ಗಂಡು ಮಕ್ಕಳು, ಈತ ಚಿಕ್ಕವನು. ದೊಡ್ಡ ಹುಡುಗನಿಗೆ ಮದುವೆಯಿನ್ನೂ ಆಗಲಿಲ್ಲ. ಆದ್ದರಿಂದ ಮೊದಲು ಅವನಿಗೆ ಮಾಡಿ ನಂತರ ಈತನಿಗೆ ಮಾಡುವ ಸಲುವಾಗಿ ಮದುವೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಚಿರಂಜೀವಿ ರೊಚ್ಚಿಗೆದಿದ್ದಾನೆ. ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಮಾತುಕತೆ ನಡೆದಿದ್ದರೂ ಅಣ್ಣನಿಗಾಗಿ ಕಾಯುತ್ತಿರುವುದು ಸರಿಯಲ್ಲ ಎನ್ನುವುದು ಈತನ ಹೇಳಿಕೆ.
ನನಗೆ ಮದುವೆ ಬೇಕು ಅಂತ ಈ ಹಿಂದೆಯೂ ಸಾಕಷ್ಟು ಹಠ ಮಾಡಿದ್ದನಂತೆ ಈತ. ಆದರೆ ಮನೆಯವರು ಕೇಳದ ಕಾರಣ ಹೀಗೆ ಮಾಡಿದ್ದಾನೆ. ಕೊನೆಗೆ ವಿಷಯವನ್ನು ಪೊಲೀಸರಿಗೆ ಮುಟ್ಟಿಸಲಾಗಿದೆ. ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿ ಟವರ್ ನಿಂದ ಕೆಳಗಿಳಿಸುವಲ್ಲಿ ಪೊಲೀಸರು ಮತ್ತು ಸ್ಥಳೀಯರು ಯಶಸ್ವಿಯಾಗಿದ್ದಾರೆ. ಟವರ್ನಿಂದ ಜಿಗಿದರೆ ರಕ್ಷಣೆ ಮಾಡಲು ಪೊಲೀಸರು ಮುಂಜಾಗ್ರತ ಕ್ರಮವಾಗಿ ಬಲೆಯನ್ನು ಒಡ್ಡಿ ನಿಂತಿದ್ದರು.
ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು ಅಂತ ಷರತ್ತು ಹಾಕಿ ಅಂತೂ ಕೆಳಕ್ಕೆ ಇಳಿದಿದ್ದಾನೆ ಚಿರಂಜೀವಿ.
ಇಲ್ಲಿದೆ ನೋಡಿ ವಿಡಿಯೋ:
ಮದುವೆಗಾಗಿ ಕಾತರನಾಗಿರುವ ಯುವಕನೊಬ್ಬ ಬೇಗ ಮದುವೆ ಮಾಡಿ ಅಂತ ಟವರ್ ಕಂಬವೇರಿ ಕುಳಿತಿರುವ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಹುಡುಗಿ ಫಿಕ್ಸ್ ಮಾಡಿದ್ರೂ ಅಣ್ಣನಿಗೆ ಮದುವೆಯಾಗಿಲ್ಲ ಎಂದು ಈತನ ಮದುವೆಯನ್ನು ಮುಂದೂಡಲಾಗಿದೆ. ಕೊನೆಗೂ ಪೊಲೀಸರ ಸಹಾಯದಿಂದ ಈತನನ್ನು ಕೆಳಕ್ಕಿಳಿಸಲಾಗಿದೆ. pic.twitter.com/vqF4tyQv7i
— Vijayavani (@VVani4U) June 14, 2021
ಸಿಂಗಲ್ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!
ಹಾಸಿಗೆಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮೊದಲ ಪತ್ನಿಯ ಶಾಕಿಂಗ್ ನ್ಯೂಸ್ ಬಿಚ್ಚಿಟ್ಟ ರಾಜ್ ಕುಂದ್ರಾ