More

    ಜ್ಯೋತಿಷಿಯ ‘ಭವಿಷ್ಯ’‌ಕ್ಕೆ ಬಲಿಯಾಯ್ತು ಎರಡು ಜೀವ- ಮಗಳಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ

    ಕೊಯಮತ್ತೂರು: ಜ್ಯೋತಿಷಿಯ ಮಾತು ಕೇಳಿ ಮಹಿಳೆಯೊಬ್ಬರು ಮಗಳನ್ನೂ ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಕೊಯಮತ್ತೂರಿನ ಅಪ್ಪನಾಯಕನಪಾಳ್ಯಂನಲ್ಲಿ ನಡೆದಿದೆ.

    ಧನಲಕ್ಷ್ಮಿ (58) ಮತ್ತು ಸುಗನ್ಯಾ (30) ಮೃತಪಟ್ಟವರು. ಧನಲಕ್ಷ್ಮಿ ಅವರು ತಮ್ಮ ಅಂಗವಿಕಲೆ ಮಗಳು ಸುಗನ್ಯಾ ಜತೆ ವಾಸವಾಗಿದ್ದರು. ಇವರು ಸದಾ ಸ್ಥಳೀಯ ಜ್ಯೋತಿಷಿ ಒಬ್ಬರ ಮಾತನ್ನು ಬಲವಾಗಿ ನಂಬುತ್ತಿದ್ದರು. ಇದೇ ಜ್ಯೋತಿಷಿ ಧನಲಕ್ಷ್ಮಿ ಅವರಿಗೆ ಭೀತಿ ಹುಟ್ಟಿಸಿಬಿಟ್ಟಿದ್ದಾನೆ. ಅದೇನೆಂದರೆ ಮುಂದೊಂದು ದಿನ ನೀವು ಕೂಡ ಮಗಳಂತೆ ಕೈ ಅಥವಾ ಕಾಲನ್ನು ಕಳೆದುಕೊಳ್ಳುತ್ತೀರಿ ಎಂದಿದ್ದಾನೆ!

    ಇದನ್ನೇ ನಂಬಿದ ಧನಲಕ್ಷ್ಮಿ ಅವರು ತಮ್ಮ ಮಗ ಶಶಿಕುಮಾರ‌ ಅವರಿಗೆ ಕರೆ ಮಾಡಿದ್ದಾರೆ. ಶಶಿಕುಮಾರ್‌ ದೂರದ ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದಾರೆ. ಧನಲಕ್ಷ್ಮಿ ಮಗನಿಗೆ ಕರೆ ಮಾಡಿ, ‘ನನಗೆ ತುಂಬಾ ಭಯವಾಗುತ್ತಿದೆ. ಜ್ಯೋತಿಷಿ ಮುಂದೊಂದು ದಿನ ನನ್ನ ಕೈ ಅಥವಾ ಕಾಲು ಹೋಗುತ್ತದೆ. ಮಗಳಂತೆಯೇ ನಿನಗೂ ಸಮಸ್ಯೆ ಬರುತ್ತದೆ ಎಂದಿದ್ದಾರೆ. ಹೀಗೆ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರ ಇರಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದಿದ್ದಾರೆ.

    ಇದನ್ನು ಕೇಳಿದ ಮಗ ಶಶಿಕುಮಾರ್‌ ಅವರು ಗಾಬರಿಯಿಂದ, ‘ಅದೆಲ್ಲಾ ನಂಬಬೇಡ. ಹಾಗೆ ಏನೂ ಆಗುವುದಿಲ್ಲ. ಒಮ್ಮೆ ಆ ರೀತಿ ಆದರೂ ನಾನು ಇದ್ದೇನೆ ನೋಡಿಕೊಳ್ಳಲು’ ಎಂದಿದ್ದಾರೆ. ಆದರೆ ಮರುದಿನ ತಾಯಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ. ಭಯಗೊಂಡ ಅವರು, ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

    ಪಕ್ಕದ ಮನೆಯವರು ಮನೆಗೆ ಹೋಗಿ ನೋಡಿದಾಗ ತಾಯಿ, ಮಗಳು ಶವವಾಗಿ ಬಿದ್ದಿರುವುದನ್ನು ಕಂಡು ಗಾಬರಿಯಿಂದ ಶಶಿಕುಮಾರ‌ ಅವರಿಗೆ ವಿಷಯ ತಿಳಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರೆ, ಮಗಳ ಬಾಯಿಯಲ್ಲಿ ನೊರೆ ಬಂದಿತ್ತು.

    ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಧನಲಕ್ಷ್ಮಿ ಮೊದಲು ಮಗಳಿಗೆ ವಿಷವುಣಿಸಿದ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.

    ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts